ಹುಬ್ಬಳ್ಳಿ, ಜ.08: ಕಾಂಗ್ರೆಸ್ನವರೇ ನಿಜವಾದ ಹಿಂದೂಗಳು. ರಾಜಕಾರಣಕ್ಕೆ ಯಾವತ್ತೂ ಹಿಂದುತ್ವ, ಶ್ರೀರಾಮನ ಬಳಸಿಕೊಂಡಿಲ್ಲ ಎಂದು ಹುಬ್ಬಳ್ಳಿಯಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಲಕ್ಷಾಂತರ ರಾಮನ ದೇವಾಲಯಗಳಿವೆ. ಬಿಜೆಪಿಯವರಿಗೆ ಇತ್ತೀಚಿನ ದಿನಗಳಲ್ಲಿ ಶ್ರೀರಾಮನ (Lord Rama) ನೆನಪಾಗಿದೆ. ಬಿಜೆಪಿಯವರು ವೋಟ್ಗಾಗಿ ರಾಮನ ನೆನಪು ಮಾಡಿಕೊಂಡಿದ್ದಾರೆ. ನಾವು ಸಾವಿರಾರು ವರ್ಷದಿಂದ ರಾಮ, ಆಂಜನೇಯ ಪೂಜೆ ಮಾಡ್ತಿದ್ದೇವೆ ಎಂದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಈ ದೇಶದಲ್ಲಿ ಲಕ್ಷಾಂತರ ರಾಮನ ದೇವಾಲಯಗಳಿವೆ. ಬಿಜೆಪಿಯವರಿಗೆ ಇತ್ತೀಚೆಗೆ ರಾಮನ ನೆನಪಾಗಿದೆ. ವೋಟ್ಗಾಗಿ ರಾಮನ ನೆನಪು ಮಾಡಿಕೊಂಡಿದ್ದಾರೆ. ಸಾವಿರಾರು ವರ್ಷಗಳಿಂದ ನಾವು ರಾಮ ಆಂಜನೇಯ ಪೂಜೆ ಮಾಡ್ತಿದ್ದೀವಿ. ನಾವು ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಲ್ಲ. ಬಿಜೆಪಿಗೆ ಏನೂ ಬಂಡವಾಳ ಇಲ್ಲ, ಅದಕ್ಕೆ ಧರ್ಮ ತರುತ್ತಾರೆ. ನಾವು ಶ್ರದ್ಧಾ ಭಕ್ತಿಯಿಂದ ಶ್ರೀರಾಮನನ್ನು ಪೂಜೆ ಮಾಡುತ್ತೇವೆ ಎಂದರು.