ಯೋಗ, ವ್ಯಾಯಾಮದ ಮೂಲಕ ವಿದ್ಯಾರ್ಥಿಗಳು ಏಕಾಗ್ರತೆಯನ್ನು ಸಾಧಿಸಬಹುದು ಎಂದು ಹೇಳಿದರು.
ನಗರದ ಸರಸ್ವತಿಪುರಂನಲ್ಲಿರುವ ಕುಕ್ಕರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನ ಆಚರಿಸಲಾಯಿತು. ಯೋಗ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಉಚಿತ ಯೋಗ ಮ್ಯಾಟ್ ವಿತರಿಸಿ ನಂತರ ಯೋಗದ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಹರೀಶ್ ಗೌಡ ,
ಎಲ್ಲ ರೋಗಗಳಿಗೆ ಯೋಗ, ವ್ಯಾಯಾಮ ಮತ್ತು ಧ್ಯಾನವು ಪ್ರಾಥಮಿಕ ಚಿಕಿತ್ಸೆಯಿದ್ದಂತೆ. ಯೋಗ ಮತ್ತು ಧ್ಯಾನವು ವಿದ್ಯಾರ್ಥಿಗಳ ಪರಿಣಾಮಕಾರಿ ಕಲಿಕೆಗೆ ನೆರವಾಗುತ್ತದೆ. ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ಅತ್ಯವಶ್ಯ. ಅದಕ್ಕಾಗಿ ನಿತ್ಯವೂ ದೇಹ ದಂಡನೆ ಮಾಡಬೇಕು. ಮಕ್ಕಳು ಏಕಾಗ್ರತೆ ಸಾಧಿಸಲು ಹಲವಾರು ತಂತ್ರಗಳಿವೆ. ಅವುಗಳನ್ನು ಮನೆಯಲ್ಲಿಯೇ ಅಭ್ಯಾಸ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ನಂತರ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ ನಟರಾಜ್ ಜೋಯಿಸ್
‘ಓದಿನಲ್ಲಿ ಸಾಧನೆ ಮಾಡಬೇಕಾದರೆ ಮನಸ್ಸಿನ ಏಕಾಗ್ರತೆ ಬಹಳ ಮುಖ್ಯ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆಯಬೇಕು’ಆಧುನಿಕ ಜೀವನ ಶೈಲಿಯಿಂದ ರೋಗಗಳು ಬರುತ್ತಿದ್ದು. ಜೀವನ ಶೈಲಿ ಬದಲಾವಣೆ ಮಾಡಿಕೊಂಡು ಯೋಗವನ್ನು ಸೀಮಿತಗೊಳಿಸದೇ ಪ್ರತಿನಿತ್ಯ ಊಟ ನಿದ್ರೆಯಂತೆ ಯೋಗವನ್ನು ಕೂಡ ದಿನಚರಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯ ಯೋಗ ಸಾಧಕರಾದ ರಾಘವೇಂದ್ರ ಪೈ ರವರು ಮಕ್ಕಳಿಗೆ
ಯೋಗದ ಮಹತ್ವ ಹಾಗೂ ಕೆಲವು ಯೋಗ ಆಸನಗಳನ್ನು ಮಕ್ಕಳಿಗೆ ಕಲಿಸಿಕೊಟ್ಟರು
ಶಾಸಕರಾದ ಹರೀಶ್ ಗೌಡ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ ನಟರಾಜ್ ಜೋಯ್ಸ್, ಹಿರಿಯ ಯೋಗ ಗುರುಗಳಾದ ಡಾ. ರಾಘವೇಂದ್ರ ಪೈ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಜೈ ಭೀಮ್ ಜನಸ್ಪಂದನಾ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು, ಅಜಯ್ ಶಾಸ್ತ್ರಿ, ನವೀನ್, ರವಿಚಂದ್ರ, ಬೈರತಿ ಲಿಂಗರಾಜು,ಹಿರಿಯ ಪ್ರೌಡ ಶಾಲೆಯ ಮುಖ್ಯೋಪಾಧ್ಯಯರು ಚಂದ್ರು,ಪ್ರಾರ್ಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ವಿಕ್ಟೋರಿಯಾ ,ಶಾಲೆಯ ಶಿಕ್ಷಕರಾದ ಪಾರ್ವತಿ ದಿವ್ಯ, ಪ್ರಿಯದರ್ಶಿನಿ, ರಾಕೇಶ್, ಸದಾಶಿವ್, ಹಾಗೂ ಇನ್ನಿತರರು ಹಾಜರಿದ್ದರು