ಪ್ರತಿನಿಧಿ ವರದಿ ಮೈಸೂರು:
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರ ಪರವಾಗಿ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಮತಯಾಚನೆ ನಡೆಸಿದರು.
ಕ್ಷೇತ್ರ ವ್ಯಾಪ್ತಿಯ ಕೃಷ್ಣಮೂರ್ತಿಪುರಂ ಭಾಗದಲ್ಲಿ ಪಾದಯತ್ರೆ ನಡೆಸಿದ ಶಾಸಕರು, ಮನೆಮನೆಗೆ ತೆರಳಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರಿಗೆ ಬೆಂಬಲ ನೀಡುವಂತೆ ಮತಯಾಚಿಸಿದರು. ಈ ವೇಳೆ ಮಾತನಾಡಿದ ಶಾಸಕ ಶ್ರೀವತ್ಸ, ದೇಶಕ್ಕಾಗಿ ಮೋದಿ ಮೈಸೂರಿಗೆ ಯದುವೀರ್ ಎಂಬ ಘೋಷಣೆ ಸಾಮಾನ್ಯ ಜನರಲ್ಲಿ ಕೇಳಿಬರುತ್ತಿರುವುದು ಸಂತಸದ ವಿಚಾರವಾಗಿದೆ. ಹಳೇ ಮೈಸೂರು ಭಾಗದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಯದುವಂಶದ ಅರಸರು ಕೊಡುಗೆ ನೀಡಿದ್ದಾರೆ. ಇಂತಹ ಯದುವಂಶದ ಕುಡಿ ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅವರಿಗೆ ಕೆ.ಆರ್.ಕ್ಷೇತ್ರದಿಂದ ಹೆಚ್ಚು ಮತಗಳ ಮುನ್ನಡೆ ನೀಡಿ ಗೆಲುವು ತಂದುಕೊಡಬೇಕೆಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ವಿಶ್ವೇಶ್ವರಯ್ಯ, ನಾಗರಾಜ್ ಬಿಲ್ಲಯ್ಯ, ಕೃಷ್ಣ, ರವಿ, ಅರುಣ್, ಅಜಯ್ ಶಾಸ್ತ್ರಿ, ಜೋಗಿ ಮಂಜು, ಓಂ ಶ್ರೀನಿವಾಸ್, ಮಮತ, ರಾಜಗೋಪಾಲ್, ಚಂದ್ರಪ್ಪ ಇತರರಿದ್ದರು.