*ಎಂ.ಎಂ ರಾಜೇಗೌಡ ಮನವಿ
ಪ್ರತಿನಿಧಿ ವರದಿ ಬೆಟ್ಟದಪುರ
ಭಾರತದ ಸಂರಕ್ಷಣೆಗೆ ನಾವೆಲ್ಲರೂ ಒಗ್ಗಟ್ಟಾಗಿ ನಿಂತು ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂದು ಪಿರಿಯಾಪಟ್ಟಣ ತಾಲೂಕು ಬಿಜೆಪಿ ಚುನಾವಣೆ ಉಸ್ತುವಾರಿ ಎಂ.ಎಂ ರಾಜೇಗೌಡ ಮನವಿ ಮಾಡಿದರು.
ಪಿರಿಯಾಪಟ್ಟಣ ತಾಲೂಕಿನ ದೊಡ್ಡಕರವಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಮನೆ ಮನೆಗೆ ಬಿಜೆಪಿ ನಡೆ ಹಾಗೂ ಕರಪತ್ರ ಹಂಚುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಡೀ ವಿಶ್ವದಲ್ಲಿಯೇ ಮೋದಿ ಅವರ ನಾಯಕ ಗುಣ ಮೆಚ್ಚುಗೆ ಪಡೆದಿದೆ. ಕಳೆದ ಹತ್ತು ವರ್ಷಗಳಿಂದ ಭಾರತ ಅಭಿವೃದ್ಧಿಗೆ ಮೋದಿ ಅವರ ಕೊಡುಗೆ ಅಪಾರವಾಗಿದ್ದು, ಅದರಲ್ಲಿಯೂ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಮೆಟ್ರೋ, 40 ಕೋಟಿ ಮನೆಗಳ ನಿರ್ಮಾಣ, ಜನ ಔಷಧಿ ಕೇಂದ್ರ, ರೈತರಿಗೆ ಹೆಚ್ಚು ಪ್ರೋತ್ಸಾಹ ಹೀಗೆ ಅನೇಕ ಯೋಜನೆಗಳನ್ನು ತಂದು ಎಲ್ಲರ ಏಳಿಗೆಗೆ ಶ್ರಮವಹಿಸಿದ್ದಾರೆ ಎಂದರು.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪ್ರತಿಯೊಬ್ಬರು ಮತ ನೀಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದೆ ವೇಳೆ ಮಂಟಿಕೊಪ್ಪಲು, ಸೂಳೆಕೋಟೆ, ಚಾಮರಾಯನಕೋಟೆ, ಹೊನ್ನಾಪುರ, ಅಂಬಲಾರೆ, ಹಾರನಹಳ್ಳಿ, ಚಪ್ಪರದಹಳ್ಳಿ ಗ್ರಾಮಗಳಲ್ಲಿ ಮನೆ ಮನೆಗೆ ನರೇಂದ್ರ ಮೋದಿ ಅವರ ಸಾಧನೆಯ ಕರಪತ್ರವನ್ನು ವಿತರಿಸಿ ಮಾತಯಾಚನೆ ಮಾಡಲಾಯಿತು.
ಬಿಜೆಪಿ ಪಕ್ಷದ ಪದಾಧಿಕಾರಿಗಳಾದ ಮಹದೇವ್, ಪ್ರಕಾಶ್, ಪರಿಷತ್, ಅಶೋಕ್, ವಿನಯ್, ಲಿಂಗರಾಜು, ಮಹೇಶ್, ಪ್ರಕಾಶ್, ಪ್ರಸನ್ನ, ಮಂಜು ಹಾಗೂ ಗ್ರಾಮಗಳ ಮುಖಂಡರು ಇದ್ದರು.
21ಬಿಟಿಪಿ01:ದೊಡ್ಡಕರವಳ್ಳಿ ಗ್ರಾಮದಲ್ಲಿ ನರೇಂದ್ರ ಮೋದಿಯವರ ಸಾಧನೆಯ ಕರಪತ್ರವನ್ನು ಹಂಚುವ ಮೂಲಕ ಮತಯಾಚನೆ ಮಾಡಿದರು. ರಾಜೇಗೌಡ, ಮಹದೇವ, ಅಶೋಕ್, ಪರಿಷತ್, ವಿನಯ್ ಇದ್ದರು.