ಪ್ರತಿನಿಧಿ ವರದಿ ಹಾಸನ
ನಗರದ ಹೊರ ವಲಯದ ದೇವೇಗೌಡ ನಗರದಲ್ಲಿ ಮನೆ ಬೀಗ ಒಡೆದು ಚಿನ್ನಾಭರಣ ಮತ್ತು ನಗದು ಹಣ ಕಳವು ಮಾಡಲಾಗಿದೆ.
ಆ.9 ರಂದು ಬೆಳಗ್ಗೆ ನಗರದ ವಾಸಿ ಸುರೇಶ್ ಎಂಬುವವರು ತಮ್ಮ ಮನೆಯಿಂದ ಆಸ್ಪತ್ರೆಗೆ ಹೋಗಿದ್ದ ಸಂದರ್ಭದಲ್ಲಿ, ಮನೆ ಬೀಗ ಒಡೆದು ಕಳ್ಳತನ ಮಾಡಲಾಗಿದೆ. ಮನೆಗೆ ವಾಪಸ್ ಹೋಗಿ ನೋಡಿದಾಗ ಮನೆಯ ಮುಂಬಾಗಿಲಿನ ಬೀಗವನ್ನು ಕಳ್ಳರು ಒಡೆದು ಮನೆಯೊಳಗೆ ಪ್ರವೇಶಿಸಿ ಬೀರುವಿನಲ್ಲಿದ್ದ 6ಗ್ರಾಂ ಚಿನ್ನದ ಉಂಗುರ ಮತ್ತು 6 ಗ್ರಾಂ ತೂಕದ 3 ಜತೆ ಚಿನ್ನದ ಓಲೆ ಹಾಗೂ 1 ಲಕ್ಷ ನಗದು ಹಣ ಕಳವು ಮಾಡಿ ಪರಾರಿಯಾಗಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.