ಮಂಡ್ಯ : ಟಿಕೆಟ್ ಅನೌನ್ಸ್ ಆಗ್ತಿದ್ದಂತೆ ಸಭೆ ಮಾಡ್ತೀನಿ ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕುವಾರು ಪ್ರವಾಸ ಮಾಡಿ ಸಭೆ ಮಾಡ್ತೀನಿ. ಜೆಡಿಎಸ್ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅದು ಅವರ ಪಕ್ಷದ ಆಂತರಿಕ ವಿಚಾರ. ಅದರಲ್ಲಿ ನಾನು ಮಧ್ಯ ಪ್ರವೇಶ ಮಾಡೋದು ಸರಿಯಲ್ಲ. ಮೈತ್ರಿ ಧರ್ಮ ಪಾಲನೆಗೆ ನಿರ್ಣಯ ಸ್ವಾಗತ. ಪಕ್ಷದಿಂದ ಬರುವ ಡೈರೆಕ್ಷನ್ ಪಾಲಿಸಲು ನಾನು ಸಿದ್ಧ. ಪಕ್ಷದ ಡೈರೆಕ್ಷನ್ ಏನು ಅಂತಾ ಕಾಯ್ತಿದ್ದೀನಿ ಎಂದು ಹೇಳಿದರು. ಇದೇ ವೇಳೆ ಅಂಡರ್ ಪಾಸ್ ವಿಚಾರವಾಗಿ ಶಾಸಕ ಗಣಿಗ ರವಿಕುಮಾರ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ ನಾನು ಕೆಲವೊಂದು ದಾಖಲೆ ಸಹಿತ ಉತ್ತರ ಹೇಳ್ತೀನಿ ಎಂದು ತಾವು ಏನು ಮಾಡಿದ್ದೀನಿ ಅನ್ನೋದ್ರ ದಾಖಲೆ ಬಿಡುಗಡೆ ಮಾಡಿದರು. ಹನಕೆರೆ ಗ್ರಾಮದ ಬಳಿ ಅಂಡರ್ ಪಾಸ್ ಗಾಗಿ ಅಡಿಷನಲ್ ಕೆಲಸಕ್ಕಾಗಿ ಹೆಚ್ಚುವರಿ ಹಣ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದಲ್ಲಿ ಪ್ರೋಸೆಸ್ ಆಗಿದೆ. ಅಂತಿಮವಾಗಿ ಸಚಿವರ ಸಹಿ ಆಗಬೇಕಿದೆ ಅದೊಂದೇ ಬಾಕಿಯಿದೆ. ಈ ಹಂತದಲ್ಲಿ ಪ್ರತಿಭಟನೆ ಮಾಡೋದು ಎಷ್ಟು ಸರಿ? ಅವರಿಗೆ ಇದು ಗೊತ್ತಿದೆಯೋ ಇಲ್ವೋ. ಗೊತ್ತಿದ್ದೂ ಈ ರೀತಿ ಮಾಡ್ತಿದ್ದಾರೋ ಗೊತ್ತಿಲ್ಲ. ಸುಳ್ಳು ಹೇಳಿ ಈ ರೀತಿ ದಿಕ್ಕು ತಪ್ಪಿಸುವ ಕೆಲಸ ಸರಿಯಲ್ಲ. ನನ್ನ ಹೋರಾಟದಿಂದ ಆಗಿದೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಇರಬಹುದು. ಅರ್ಧಬಂರ್ಧ ತಿಳಿದು ಮಾತಾಡೋದು ಸರಿಯಲ್ಲ. ನನಗೆ ಕ್ರೆಡಿಟ್ ಏನೂ ಬೇಡ. ನನಗೆ ಅದರ ಅವಶ್ಯಕತೆ ನನಗಿಲ್ಲ. ಗಡ್ಕರಿ ಅವರನ್ನ ಸಾಕಷ್ಟು ಸಲ ಭೇಟಿ ಮಾಡಿ ಹಲವು ಬೇಡಿಕೆ ಇಟ್ಟಿದ್ದೆ. ಅದರ ಫಲವಾಗಿ ಅನುಮೋದನೆ ಸಿಕ್ಕಿದೆ. ಗಡ್ಕರಿ, ಬಿಜೆಪಿ ಸರ್ಕಾರ ಸಾಕಷ್ಟು ಹೆದ್ದಾರಿ ಅಭಿವೃದ್ಧಿ ಮಾಡಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ರಸ್ತೆ ಆಗಿದೆ.ಇದರ ಕ್ರೆಡಿಟ್ ನ ಬಿಜೆಪಿಗೆ ಕೊಡಲು ಕಾಂಗ್ರೆಸ್ನವರು ಸಿದ್ಧರಿಲ್ಲ. ಹೀಗಾಗಿ ಈ ರೀತಿಯ ಹೋರಾಟ ಮಾಡ್ತಿದ್ದಾರೆ ಎಂದು ಹೇಳಿದರು.