ಮೈಸೂರು: ವಿಶ್ವಗುರು ಬಸವಣ್ಣನವರ ‘ಇವ ನಮ್ಮವ ಇವ ನಮ್ಮವ’ ಎಂಬ ವಚನದ ಸಾಲಿನ ಆಶಯದೊಂದಿಗೆ ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಆಯೋಜನೆ ಮಾಡಲಾಗಿದ್ದು, ರಂಗಾಯಣದ ಅಂಗಳ ಈಗಾಗಲೇ ಮದುವಣಿಗಿತ್ತಿಯಂತೆ ಸಿಂಗಾರಗೊಂಡಿದೆ.ಮಾ. 6 ರಿಂದ 11 ರವರೆಗೆ 6 ದಿನ ರಂಗಪ್ರೇಕ್ಷಕರು ಬಹುರೂಪಿ ಸಂಭ್ರಮದಲ್ಲಿ ಮಿಂದೇಳಲಿದ್ದಾರೆ. ರಂಗಾಯಣದ ಆವರಣದಲ್ಲಿ ಸ್ವಚ್ಛತಾ ಕಾರ್ಯ, ಬಣ್ಣ ಬಳಿಯುವಿಕೆ, ವೇದಿಕೆ ವಿನ್ಯಾಸ, ನಾಟಕಗಳ ತಾಲೀಮು, ಶಿಲ್ಪಗಳ ಕೆತ್ತನೆ, ಬ್ಯಾನರ್ ಕಟ್ಟುವ ಕೆಲಸ ಭರ್ಜರಿಯಾಗಿಯೇ ನಡೆಯುತ್ತಿದೆ. ಬಹುರೂಪಿ ನಾಟಕೋತ್ಸವವನ್ನು ಮಾ. 7ರ ಸಂಜೆ 4.30ಕ್ಕೆ ವನರಂಗದಲ್ಲಿಸಾಹಿತಿ ಜಯಂತ್ ಕಾಯ್ಕಿಣಿ ಉದ್ಘಾಟಿಸುವರು.