ಪ್ರತಿನೀಧಿ ವರದಿ ಗೋಣಿಕೊಪ್ಪ
ಹರಿಶ್ಚಂದ್ರಪುರ ಕಿಲೇರಿ ಮುತ್ತಪ್ಪ ಮಠಪುರದಲ್ಲಿ ಮುತ್ತಪ್ಪ ಜಾತ್ರೆ ಜರುಗಿತು.
ಶುಕ್ರವಾರ ಗಣಪತಿ ಹೋಮದಿಂದ ಆರಂಭಿಸಲಾಯಿತು. ಪ್ರತಿಷ್ಠಾ ದಿನಾಚರನೆ, ವೆಳ್ಳಾಟಂ ನಡೆಯಿತು. ಶನಿವಾರ ಮುತ್ತಪ್ಪ ದೇವರ ತೆರೆ ನೆರವೇರಿತು. ಕಾರಣೋರ್ ವೆಳ್ಳಾಟಂ, ಮುತ್ತಪ್ಪನ್, ಗುಳಿಗನ್, ಕಂಡಾಕರ್ಣನ್, ವಸೂರಿಮಾಲಾ, ವಿಷ್ಣುಮೂರ್ತಿ, ತಿರುವಪ್ಪನ್ ಪೋದಿ, ಕಳಸ ಸ್ವಾಗತಂ ಜರುಗಿತು. ಭಾನುವಾರ ಗುಳಿಗನ್ ತೆರೆ, ಕಂಡಾಕರ್ಣನ್ ತೆರೆ, ತಿರುವಪ್ಪನ್, ಪೋದಿ, ಕಾರಣೋರ್, ವಸೂರಿಮಾಲಾ, ವಿಷ್ಣುಮೂರ್ತಿ ತೆರೆ ನಡೆಯಿತು.