ಮೈಸೂರು: ಈ ಚುನಾವಣೆಯಲ್ಲಿ ನಾನು ಸೋತರೆ ಸತ್ತ ಹಾಗೆ, ನಾನು ನಾಲ್ಕು ಚುನಾವಣೆಯಲ್ಲಿ ಸೋತು, ಸುಸ್ತಾಗಿ ಹೋಗಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ದಯವಿಟ್ಟು ನನ್ನ ಕೈಬಿಡಬೇಡಿ ಎಂದು ಮೈಸೂರು- ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮತದಾದದರಲ್ಲಿ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಹೊಲ ಹುತ್ತು, ಗೊಬ್ಬರ ಹೊಡೆದು, ರಾಗಿ ಬೆಳೆದು ಜೀವನ ಮಾಡಿದ್ದೇನೆ. ಇಂಜಿನಿಯರಿಂಗ್ನಲ್ಲಿ ಬಿ.ಟೆಕ್, ಎಂ.ಟೆಕ್, ಪಿಎಚ್ಡಿ ಮಾಡಿದ್ದೇನೆ. ನನ್ನ ಹೆಸರಿನ ಮುಂದೆ ಪ್ರಿಫಿಕ್ಸ್, ಸಫಿಕ್ಸ್ ಇಲ್ಲ. ರಾಜ, ಒಡೆಯರ್ ಅಂತ ಯಾವುದೂ ಇಲ್ಲ. ಕೆಲವರು ಲಕ್ಷ್ಮಣ್ ಗೌಡ ಅಂತ ಮಾಡಿಕೊಳ್ಳಿ ಅಂತ ಸಲಹೆ ಕೊಟ್ರು. ನನ್ನ ತಂದೆ- ತಾಯಿ ಇಟ್ಟ ಹೆಸರನ್ನು ಚುನಾವಣೆಗಾಗಿ ಬದಲಾವಣೆ ಮಾಡಿಕೊಂಡಿಲ್ಲ. ನಾನು ಒಕ್ಕಲಿಗ ಸಮುದಾಯಕ್ಕೆ ಸೇರಿದವನು. ತುಳಸಿದಾಸಪ್ಪ ನಂತರ 47 ವರ್ಷಗಳ ನಂತರ ಕಾಂಗ್ರೆಸ್ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ಕೊಟ್ಟಿದೆ. ಸಿದ್ದರಾಮಯ್ಯ ಒಕ್ಕಲಿಗ ವಿರೋಧಿ ಅನ್ನುವ ಅಪವಾದ ತೊಡೆದು ಹಾಕಿದ್ದಾರೆ ಎಂದು ಎಂ.ಲಕ್ಷ್ಮಣ್ ಹೇಳಿದ್ದಾರೆ.