ಮೈಸೂರು ಅ.11: ನಾಡಹಬ್ಬ ದಸರಾ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ದಸರಾ ಪ್ರಮುಖ ಆಕರ್ಷಣೆ ನಾಡಕುಸ್ತಿಗೆ ಅಖಾಡ ಸಿದ್ಧವಾಗಿದೆ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಅರಿಶಿಣ, ಪಚ್ಚ ಕರ್ಪೂರ ಸೇರಿ ಹಲವು ವಸ್ತುಗಳ ಮಿಶ್ರಣದಿಂದ ಅಖಾಡವನ್ನು ತಯಾರಿಸಲಾಗಿದೆ. ಅ. 15 ರಂದು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಲಾಗುತ್ತದೆ. ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ, ದಸರಾ ಕಿಶೋರಿ, ಮತ್ತು ಮೈಸೂರು ಕೇಸರಿ ಸೇರಿ ಹಲವು ಪ್ರಶಸ್ತಿ ನೀಡಲಾಗುತ್ತದೆ.