ಮೈಸೂರು: ವಿಶ್ವವಿಖ್ಯಾತ ದಸರಾ ಹಬ್ಬ ಸಮೀಪಿಸುತ್ತಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ. ಇವೆಲ್ಲದರ ನಡುವೆ ಯುವಜನತೆಯನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ಕಾರ್ಯಕ್ರಮ ಹಾಗೂ ಯುವ ಜನತೆ ಕಾತುರರಾಗಿ ಕಾರ್ಯಕ್ರಮ ಅಂದರೆ ಅದು ಯುವ ದಸರಾ.., ಇದೀಗ ಯುವ ದಸರಾ ಕಾರ್ಯಕ್ರಮಕ್ಕೂ ಕೂಡ ಮೈಸೂರಿನ ಹೊರವಲಯದಲ್ಲಿ ಭರ್ಜರಿಯಾಗಿ ವೇದಿಕೆ ರೆಡಿಯಾಗ್ತಿದೆ. OCTOBER 6 ರಿಂದ ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರಸುಂದರಿ ದೇಗುಲ ಸಮೀಪದ ಬೃಹತ್ ಮೈದಾನದಲ್ಲಿ ಯುವದಸರಾ ನಡೆಯಲಿದೆ. ಈ ಬಾರಿ 5 ದಿನ ಯುವ ದಸರಾ ಜಗಮಗಿಸಲಿದ್ದು, ಶ್ರೇಯಾ ಘೋಷಾಲ್ , ಇಳಯರಾಜ , ಗಾಯಕ ಬಾದ್ ಶಾ , ಎ ಆರ್ ರೆಹಮಾನ್ , ರವಿ ಬಸ್ರುರ್ ಕಾರ್ಯಕ್ರಮ ನೀಡಲಿದ್ದಾರೆ. ಮಹಾರಾಜ ಕಾಲೇಜು ಮೈದಾನದಿಂದ ಮೈಸೂರು ಹೊರವಲಯಕ್ಕೆ ಇದೇ ಮೊದಲ ಬಾರಿಗೆ ಕಾರ್ಯಕ್ರಮ ಸ್ಥಳಾಂತರ ಮಾಡಲಾಗಿದೆ. ಹೊಸದಾಗಿ ಆಯೋಜನೆಗೊಂಡಿರುವ ಮೈದಾನದಲ್ಲಿ ಕನಿಷ್ಠ 2 ಲಕ್ಷ ಜನರು ಸೇರಬಹುದಾಗಿದೆ.
ಕಾರ್ಯಕ್ರಮದ ಸ್ಥಳಾಂತರಕ್ಕೆ ಪರ- ವಿರೋಧ
ಪ್ರತಿವರ್ಷವೂ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜನೆ ಮಾಡುತ್ತಿದ್ದಂತಹ ಯುವ ದಸರಾ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ನಗರದ ಹೊರವಲಯದ ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರಸುಂದರಿ ದೇಗುಲ ಸಮೀಪದ ಬೃಹತ್ ಮೈದಾನವೊಂದರಲ್ಲಿ ಆಯೋಜಿಸಲಾಗಿದ್ದು, ಇದಕ್ಕೆ ವ್ಯಾಪಕ ಪರ-ವಿರೋಧಗಳು ವ್ಯಕ್ತವಾಗಿದೆ. ಟ್ರಾಫಿಕ್ ಸಮಸ್ಯೆಯಿಂದ ಕಿರಿ ಕಿರಿ ಅನುಭವ ಪಡೆದಿರುವವರು ಯುವದಸರಾ ಕಾರ್ಯಕ್ರಮದ ಸ್ಥಳ ಬದಲಾವಣೆಗೆ ಸಂತಸ ವ್ಯಕ್ತಪಡಿಸುತ್ತಾ ಇದ್ದರೆ, ಹೊರವಲಯದಲ್ಲಿ ಆಯೋಜನೆ ಮಾಡಿರುವ ಕಾರಣ ತುಂಬಾ ದೂರಕ್ಕೆ ಸ್ಥಳಾಂತರ ಮಾಡಲಾಗಿದೆ, ಹೆಣ್ಣುಮಕ್ಕಳಿಗೆ ಯಾವುದೇ ರೀತಿಯ ಸುರಕ್ಷತೆ ಇರುವುದಿಲ್ಲ, ಕಾರ್ಯಕ್ರಮ ಮುಗಿಯುವುದು ತಡವಾದರೆ ಮನೆ ತಲುಪುವುದು ಹೇಗೆ