ದಕ್ಷಿಣಕಾಶಿ ನಂಜನಗೂಡಿಗೆ ಪ್ರತಿನಿತ್ಯ ಸಾವಿರಾರು ಜನ ಭೇಟಿ ಕೊಡ್ತಾರೆ. ತಮ್ಮ ಕಷ್ಟ ಪರಿಹರಿಸುವಂತೆ ವಿಶೇಷ ಪ್ರಾರ್ಥನೆ ಸಲಿಸ್ತಾರೆ. ಇದೀಗ ನಂಜುಂಡೇಶ್ವರ ದೇವರಿಗೆ ಪತ್ರ ಬರೆದ ಪತ್ರಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.
ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಪತ್ರ ಬರೆದು ಭಕ್ತರು ಆಗ್ರಹ ಮಾಡಿದ್ದಾರೆ.ಹುಂಡಿ ಎಣಿಕೆ ವೇಳೆ ಸಾಕಷ್ಟು ಪತ್ರಗಳು ಪತ್ತೆಯಾಗಿದ್ದು, ಕಾಣಿಕೆ ಜೊತೆ ಪತ್ರವನ್ನು ಸಹ ಬರೆದು ನಂಜುಂಡೇಶ್ವರ ಸ್ವಾಮಿಯ ಭಕ್ತರು ಹುಂಡಿಯೊಳಗೆ ಹಾಕಿದ್ದಾರೆ.ನಂಜನಗೂಡಿನ ದೇವಸ್ಥಾನದ ಬಳಿ ಬಡವರ ವಾಸ್ತವ್ಯಕ್ಕೆ ವ್ಯವಸ್ಥೆ ಇಲ್ಲ.ಕಪಿಲಾ ನದಿಯ ದಡದಲ್ಲಿ ಬಟ್ಟೆ ಬದಲಾಯಿಸಲು ಜಾಗವಿಲ್ಲ.ಬಡ ಭಕ್ತರಿಗೆ ಸರಿಯಾದ ಪ್ರಸಾದವಿಲ್ಲ.
ದಯವಿಟ್ಟು ಭಕ್ತರು ಹಾಕುವ ಹಣವನ್ನು ಮೂಲಭೂತ ಸೌಕರ್ಯಕ್ಕೆ ಬಳಸಿ ಎಂದು ಬರೆದಿರುವ ಸಾಕಷ್ಟು ಪತ್ರಗಳು ಹುಂಡಿ ಎಣಿಕೆ ವೇಳೆ ಪತ್ತೆಯಾಗಿದೆ.