ದೇವನಹಳ್ಳಿ: ಈ ಬಾರಿ ಮತ್ತೊಮ್ಮೆ ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕೆಂಬ ಉದ್ದೇಶದಿಂದ ಪ್ರತಿ ಕಾರ್ಯಕರ್ತರು ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ದೇವನಹಳ್ಳಿ ಪಟ್ಟಣದ ಗಾರೆ ರವಿಕುಮಾರ್ ಲೇಔಟಿನಲ್ಲಿರುವ ರಾಜ್ಯ ಎಸ್ಸಿ ಮೋರ್ಚಾ ಖಜಾಂಚಿ ಎಕೆಪಿ ನಾಗೇಶ್ ಅವರ ನಿವಾಸದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹಾಗೂ ಚಿಕ್ಬಳ್ಳಾಪುರ ಲೋಕಸಭಾ ಕ್ಷೇತ್ರ ಎನ್.ಡಿ.ಎ.ಅಭ್ಯರ್ಥಿ ಕೆ.ಸುಧಾಕರ್ ಭೇಟಿ ನೀಡುವುದರ ಮೂಲಕ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬಿಜೆಪಿ ಬಾವುಟವನ್ನು ಹಾರಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಎನ್.ಡಿ.ಎ ಅಭ್ಯರ್ಥಿ ಕೆ.ಸುಧಾಕರ್ ಮಾತನಾಡಿ, ಸಂಸ್ಥಾಪನ ದಿನವನ್ನು ಆಚರಿಸುತ್ತಿದ್ದು 45 ವರ್ಷಗಳು ಕಳೆದಿದೆ. ಎರಡು ಸ್ಥಾನಗಳಿಂದ ಪ್ರಾರಂಭವಾದ ಪಕ್ಷ ಭಾಜಪವಾಗಿದೆ. ಕಾರ್ಯಕರ್ತರ ಶ್ರಮ ಸಂಘಟನೆ ಮತ್ತು ಶಕ್ತಿ ಈ ಮೂರರಿಂದ ಇವತ್ತು 400 ಸ್ಥಾನಗಳವರೆಗೆ ಬರ್ತೀವಿ ಅನ್ನುವ ವಿಶ್ವಾಸ. ಇದು ಪಕ್ಷದ ಆಶಯದಿಂದ ಆಗಿದೆ. ರಾಷ್ಟ್ರೀಯತೆ, ದೇಶಾಭಿಮಾನ, ಸಮಗ್ರತೆ, ದೇಶವನ್ನು ಇಡೀ ವಿಶ್ವದಲ್ಲಿ ಅತ್ಯಂತ ಎತ್ತರಕ್ಕೆ ತೆಗೆದುಕೊಂಡು ಹೋಗುವ ತತ್ವ ಸಿದ್ಧಾಂತದಿಂದ ಒಂದು ಅಡಿಪಾಯದಲ್ಲಿ ಬೆಳೆದಂತಹ ಒಂದು ರಾಜಕೀಯ ಪಕ್ಷವಾಗಿದೆ ಎಂದರು.
ರಾಜ್ಯ ಎಸ್ಸಿ ಮೋರ್ಚ ಖಜಾಂಚಿ ಎಕೆಪಿ ನಾಗೇಶ್, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್.ಎಂ, ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಸಂಚಾಲಕ ಅಂಬರೀಶ್ ಗೌಡ, ಟೌನ್ ಅಧ್ಯಕ್ಷ ಸಂದೀಪ್, ನೀಲೇರಿ ಮಂಜುನಾಥ್, ಚೇತನ್ ಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ವಿಮಲಾ ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗವೇಣಿ ಇದ್ದರು.
6ಡಿಎಚ್ಎಲ್ ಪಿ-೧
ದೇವನಹಳ್ಳಿ ಪಟ್ಟಣದ ಗಾರೆ ರವಿಕುಮಾರ್ ಲೇಔಟಿನಲ್ಲಿರುವ ರಾಜ್ಯ ಎಸ್ಸಿ ಮೋರ್ಚಾ ಖಜಾಂಚಿ ಎಕೆಪಿ ನಾಗೇಶ್ ಅವರ ನಿವಾಸದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ರಾಜ್ಯ ಎಸ್ಸಿ ಮೋರ್ಚಾ ಖಜಾಂಚಿ ಎಕೆಪಿ ನಾಗೇಶ್ ಮತ್ತು ಅವರ ಕುಟುಂಬದವರು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ಡಾ. ಸುಧಾಕರ್ ಅವರನ್ನು ಸನ್ಮಾನಿಸಿದ ಕ್ಷಣ.