- ಮುಖ್ಯರಸ್ತೆಗೆ ಲಿಂಕ್ ರಸ್ತೆಗಳ ಜೋಡಣೆಗೆ ಸಲಹೆ । ಸಾರ್ವಜನಿಕರಿಂದ ಒತ್ತಾಯ
- ಹೊರ ರಾಜ್ಯಕ್ಕೆ ಸಂಪರ್ಕ ಬೆಸೆಯುವ ರಸ್ತೆಗಳಲಿ ವಾಹನ ದಟ್ಟಣೆ
ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಗೋಣಿಕೊಪ್ಪ ಟ್ರಾಫಿಕ್ ಕಿರಿಕಿರಿಗೆ ಲಿಂಕ್ ರಸ್ತೆಗಳ ಅಭಿವೃದ್ಧಿ ಪರಿಹಾರ ಮಾರ್ಗಗಳಾಗಿವೆ. ಮುಖ್ಯರಸ್ತೆ ಅವಲಂಬನೆ ತಪ್ಪಿಸಲು ನವ ಮಾರ್ಗಗಳ ಅಭಿವೃದ್ದಿಯಾಗಬೇಕು ಎಂಬ ಒತ್ತಾಯ ಸಾರ್ವಜನಿಕರಲ್ಲಿ ಕೇಳಿ ಬಂದಿದೆ.
ಕೇರಳ ರಾಜ್ಯಕ್ಕೆ ಸಂಪರ್ಕ ಬೆಸೆಯುವ ಮತ್ತು ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ಪಟ್ಟಣವಾಗಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಕೇರಳ ರಾಜ್ಯಕ್ಕೆ ವಿರಾಜಪೇಟೆ ಮತ್ತು ಕುಟ್ಟ ರಸ್ತೆ ಅವಲಂಬನೆ ಇರುವುದರಿಂದ ವಾಹನ ಸಂಚಾರ ಹೆಚ್ಚಾಗುತ್ತಿದೆ. ಆದರೆ, ಮುಖ್ಯ ರಸ್ತೆಗೆ ಸಂಪರ್ಕಿಸಲು ಲಿಂಕ್ ರಸ್ತೆಗಳು ಅಭಿವೃದ್ದಿಯಾಗಿಲ್ಲ. ಇದರಿಂದ ಸಮಸ್ಯೆ ಪರಿಹಾರ ಕಾಣದಂತಾಗಿದೆ. ಟ್ರಾಫಿಕ್ ಕಿರಿಕಿರಿಗೆ ಪೊಲೀಸ್ ಇಲಾಖೆ ಮೇಲೆ ನೇರ ಆರೋಪ ವ್ಯಕ್ತವಾಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಲಿಂಕ್ ರಸ್ತೆಗಳ ಅಭಿವೃದಿ ಮುಖ್ಯವಾಗಿದೆ.
ನವ ಮಾರ್ಗಗಳು:
ಲಿಂಕ್ ರಸ್ತೆ-1 ; ಬೈಪಾಸ್ ರಸ್ತೆ ಮೂಲಕ ಸೆಂಟ್ ಥೋಮಸ್ ರಸ್ತೆ ಜಂಕ್ಷನ್ ಮೂಲಕ 100 ಮೀಟರ್ ರಸ್ತೆ ದೂರದಲ್ಲಿಕೀರೆ ಹೊಳೆಗೆ ಸೇತುವ ನಿರ್ಮಿಸಿ ರಸ್ತೆ ನಿರ್ಮಿಸುವುದು. ಹರಿಶ್ಚಂದ್ರಪುರಕ್ಕೆ ರಸ್ತೆ ಸಂಪರ್ಕಿಸುವಂತೆ ಯೋಜನೆ ರೂಪಿಸುವುದು.
ಲಿಂಕ್ ರಸ್ತೆ-2 ; ಹಿಂದೂ ರುದ್ರಭೂಮಿ ಸಮೀಪವಿರುವ ರಸ್ತೆಯನ್ನು ಹರಿಶ್ಚಂದ್ರಪುರಕ್ಕೆ ಸಂಪರ್ಕಿಸುವಂತೆ ಅಭಿವೃದ್ಧಿ ಪಡಿಸುವುದು.
ಲಿಂಕ್ ರಸ್ತೆ-3 ; ಪೊನ್ನಂಪೇಟೆ ರಸ್ತೆಯಲ್ಲಿರುವ ಆಟೋ ಫೋಕಸ್ ಗ್ಯಾರೇಜ್ ಸಮೀಪವಿರುವ ರಸ್ತೆಯಲ್ಲಿ ಮೈಸೂರಮ್ಮ ನಗರಕ್ಕೆ ಸೇರುವಂತೆ ಅಭಿವೃದ್ಧಿಪಡಿಸುವುದು.
ಲಿಂಕ್ ರಸ್ತೆ-4 ; ಪಾಲಿಬೆಟ್ಟ ರಸ್ತೆಯ ಅತ್ತೂರು ಸಮೀಪದ ರಸ್ತೆ ಮೂಲಕ ಸೀಗೆತೋಡಿಗೆ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸುವುದು.
ಲಿಂಕ್ ರಸ್ತೆ-5 ; ಪೊನ್ನಂಪೇಟೆ ರಸ್ತೆ ಮೂಲಕ ಬಾಳಾಜಿ ರಸ್ತೆ ಮೂಲಕ ಮಾಯಮುಡಿ ಮಾರ್ಗವಾಗಿ ಸುಲಭವಾಗಿ ಮೈಸೂರು ರಸ್ತೆಗೆ ಸಂಪರ್ಕಿಸುವಂತೆ ಯೋಜನೆ ರೂಪಿಸಿವುದು.
ಲಿಂಕ್ ರಸ್ತೆ-6 ; ಗೋಣಿಕೊಪ್ಪ ಮಾರುಕಟ್ಟೆ ಮೂಲಕ ಕೀರೆಹೊಳೆ ಸೇತುವೆ ನಿರ್ಮಿಸುವುದು.
ಲಿಂಕ್ ರಸ್ತೆ-7 ; ಗೋಣಿಕೊಪ್ಪ ಬೈಪಾಸ್ ಮೂಲಕ ಪರಿಮಳ ಮಂಗಳ ವಿಹಾರ ಮಾರ್ಗದಲ್ಲಿ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸುವುದು.
ಲಿಂಕ್ ರಸ್ತೆ-8 ; ಹಾತೂರು-ಕುಂದ ರಸ್ತೆ ಬಳಕೆಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವುದು.
ಲಿಂಕ್ ರಸ್ತೆ-9 ; ಕೈಕೇರಿಯಿಂದ ಕಳತ್ಮಾಡು, ಅತ್ತೂರು ಮೂಲಕ ಪಾಲಿಬೆಟ್ಟ ಮೂಲಕ ತಿತಿಮತಿಗೆ ಸೇರುವ ಮಾರ್ಗವನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡುವುದು.
ನಿಷ್ಪ್ರಯೋಜಕ: ಪೊನ್ನಂಪೇಟೆ-ಬೈಪಾಸ್ ರಸ್ತೆ ಜಂಕ್ಷನ್ ಮೂಲಕ ಮಸೀದಿ ಮೂಲಕ ರಸ್ತೆ ನಿರ್ಮಿಸುವ ಯೋಜನೆ ಕೂಡ ವ್ಯರ್ಥವಾಗಲಿದೆ. ನಾಲ್ಕು ರಸ್ತೆಗಳು ಒಂದೇ ಜಾಗದಲ್ಲಿ ಸೇರುವುದರಿಂದ ವಾಹನಗಳು ನಾಲ್ಕು ರಸ್ತೆಗಳಿಗೆ ತೆರಳಬೇಕಾದ ಕಾರಣ ಮತ್ತಷು ದಟ್ಟಣೆಯಾಗುವ ಸಾಧ್ಯತೆ ಹೆಚ್ಚು. ಇದರಿಂದಾಗಿ ಸೆಂಟ್ ಥೋಮಸ್ ರಸ್ತೆ ಮೂಲಕ 100 ಮೀಟರ್ ದೂರದಲ್ಲಿ ಕೀರೆ ಹೊಳೆ ಮೂಲಕ ಹರಿಶ್ಚಂದ್ರಪುರ ಸಂಪರ್ಕಿಸುವ ಪ್ರಯತ್ನ ಉತ್ತಮ. ಮಸೀದಿ ಮೂಲಕ ನಿರ್ಮಿಸುವ ಸೇತುವೆ ಮಾರ್ಗದಲ್ಲಿ ದೊಡ್ಡ ತಿರುವು ಮತ್ತಷ್ಟು ಸಮಸ್ಯೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ದಟ್ಟಣೆ ವ್ಯಾಪ್ತಿ: ಪೊನ್ನಂಪೇಟೆ ರಸ್ತೆ ಜಂಕ್ಷನ್ ಭಾಗದಿಂದ ಸುಮಾರು 300 ಮೀ.ವಿಸ್ತೀರ್ಣದಲ್ಲಿ ಮೂರು ರಸ್ತೆಗಳು ದಟ್ಟಣೆಯಾಗುತ್ತಿದೆ. ಬಸ್ ನಿಲ್ದಾಣಕ್ಕೆ ಸೇರುವ ರಸ್ತೆ, ಹರಿಶ್ಚಂದ್ರಪುರಕ್ಕೆ ತೆರಳುವ ರಸ್ತೆ, ಪೊನ್ನಂಪೇಟೆಗೆ ತೆರಳುವ ರಸ್ತೆ ಹೆಚ್ಚು ಸಮಸ್ಯೆಯಾಗುತ್ತಿದೆ. ಮೂರು ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾದಾಗ ಪಾಲಿಬೆಟ್ಟ ರಸ್ತೆಯಲ್ಲಿ ಕಿರಿಕಿರಿ ಹೆಚ್ಚಾಗುತ್ತದೆ.
ಕಾರಣಗಳು: ಅಂಗಡಿ, ಮಳಿಗೆಗೆ ಬರುವ ಗ್ರಾಹಕರು ಖರೀದಿ ಮಾಡುವ ಅಂಗಡಿ ಎದುರು ವಾಹನ ನಿಲ್ಲಿಸುವ ಪ್ರಯತ್ನ ವಾಹನ ದಟ್ಟಣೆಗೆ ಹೆಚ್ಚಾಗಿ ಕಾರಣವಾಗುತ್ತಿದೆ. ವರ್ತಕರಿಂದ ವಸ್ತುಗಳನ್ನು ವಾಹನದಲ್ಲಿಯೇ ಕುಳಿತು ಖರೀದಿ ಮಾಡುವುದರಿಂದ ಬೇರೆ ವಾಹನಗಳು ಸಂಚರಿಸಲು ತೊಡಕ್ಕುಂಟಾಗುತ್ತಿದೆ. ವಾಹನಗಳು ಸಾಲು ಸಾಲು ನಿಂತು ದಟ್ಟಣೆ ಹೆಚ್ಚಾಗುವಂತಾಗಿದೆ. ಪೊನ್ನಂಪೇಟೆ ರಸ್ತೆ ಜಂಕ್ಷನ್ನಲ್ಲಿ ಸ್ವಲ್ಪ ದೂರದಲ್ಲಿ ಬಸ್ ನಿಲ್ಲಿಸುವ ನಿಯಮ ಪಾಲನೆ ಇಲ್ಲ.
ಮೈಸೂರು ಕಡೆಯಿಂದ ಶನಿವಾರ, ಭಾನುವಾರ ಆಗಮಿಸುವ ವಾಹನಗಳು ಹೆಚ್ಚು. ಇದೇ ದಿನಗಳಲ್ಲಿ ಸ್ಥಳೀಯ ಖಾಸಗಿ ಕಾರ್ಯಕ್ರಮಗಳು ಹೆಚ್ಚಿರುತ್ತದೆ. ವಾಹನಗಳು ಹೆಚ್ಚಾಗುವುದರಿಂದ ಪ್ರತಿಕೂಲ ಪರಿಣಾಮ ಹೆಚ್ಚಾಗುತ್ತಿದೆ. ಗೋಣಿಕೊಪ್ಪ ಪಟ್ಟಣಕ್ಕೆ ಸೇರದಂತೆ ಸಂಚರಿಸಲು ಬೈಪಾಸ್ ರಸ್ತೆ ಇಲ್ಲದಿರುವುದು ಕೂಡ ಸಮಸ್ಯೆಯಾಗಿದೆ. ಏಕಮುಖ ಸಂಚಾರ ಪ್ರಯೋಗ ಕೂಡ ವ್ಯರ್ಥವಾಗಿದೆ.
————-
ಕೋರ್ಟ್
ಲಿಂಕ್ ರಸ್ತೆಗಳ ಅಭಿವೃದ್ದಿಯಿಂದ ಪ್ರಯಾಣಿಕರು ಪಟ್ಟಣ ಸೇರಿದಂತೆ ಸಂಚರಿಸಲು ಅವಕಾಶವಿದೆ. ಇಂತಹ ಯೋಜನೆಗಳು ಅನುಷ್ಠಾನಗೊಳ್ಳಬೇಕಿದೆ.
– ಕಳ್ಳಿಕಂಡ ಪಿ.ನವೀನ್, ಸದಸ್ಯರು, ಗ್ರಾಪಂ ರ್ವತೊಕ್ಲು.
ಗೋಣಿಕೊಪ್ಪ ಪಟ್ಟಣದಲ್ಲಿ ವಾಹನ ದಟ್ಟಣೆ ಪರಿಹಾರಕ್ಕೆ ಚಾಲಕರು, ಸಾರ್ವಜನಿಕರು ಶಿಸ್ತು ಪಾಲಿಸುವುದು ಮುಖ್ಯ. ಬೈಪಾಸ್ ಮೂಲಕ ಹರಿಶ್ಚಂದ್ರಪುರ ಮಾರ್ಗಕ್ಕೆ ಸಂಪರ್ಕಿಸಲು ಕೂಡ ಯೋಜನೆ ರೂಪಿಸಲಾಗುತ್ತಿದೆ. ಪರ್ಯಾಯ ರಸ್ತೆ ಅಭಿವೃದ್ಧಿಗೂ ಚಿಂತನೆ ನಡೆಸಲಾಗುವುದು.
– ಎ. ಎಸ್.ಪೊನ್ನಣ್ಣ, ಶಾಸಕರು, ವಿರಾಜಪೇಟೆ.
ಫೋಟೋ 14 ಜಿಕೆಪಿ 02 ; ಪೊನ್ನಂಪೇಟೆ ಹಿಂದೂ ರುದ್ರಭೂಮಿ ಸಮೀಪದ ರಸ್ತೆ
03 ; ಬೈಪಾಸ್ ಮೂಲಕ ಕೀರೆ ಹೊಳೆ ಮಾರ್ಗವಾಗಿ ಸಂಪರ್ಕಿಸುವ ಮಾರ್ಗ
04 ; ಪೊನ್ನಂಪೇಟೆ ರಸ್ತೆ ಮೂಲಕ ಮೈಸೂರಮ್ಮ ನಗರಕ್ಕೆ ಸೇರುವ ಮಾರ್ಗ
05 ; ಗೋಣಿಕೊಪ್ಪ ಟ್ರಾಫಿಕ್ (ಸಂಗ್ರಹ ಚಿತ್ರ)
06 ; ಎ.ಎಸ್.ಪೊನ್ನಣ್ಣ
07 ; ಕಳ್ಳಿಕಂಡ ಪಿ.ನವೀನ್
08 ; ಮೈಸೂರಮ್ಮ ನಗರ ರಸ್ತೆ