ಪ್ರತಿನಿಧಿ ವರದಿ ಕೆ.ಆರ್.ಪುರ
ಒಂದು ಗ್ರಂಥಾಲಯ ಕಟ್ಟಿದರೆ ಲಕ್ಷ ವಿದ್ವಾಂಸರು ಹುಟ್ಟುತ್ತಾರೆ ಎಂಬ ನಾನ್ನುಡಿಯಂತೆ ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಲು ಪುಸ್ತಕಗಳು ಸಹಕಾರಿಯಾಗಲಿವೆ ಎಂದು ಕೃಷ್ಣಯ್ಯ ಶೆಟ್ಟಿ & ಸನ್ಸ್ ಟ್ರಸ್ಟಿನ ಪೌಂಡೇಷನ್ ಮುಖ್ಯಸ್ಥರಾದ ತ್ರಿವೇಣಿ ವಿನೋದ್ ಅವರು ತಿಳಿಸಿದರು.
ಕ್ಷೇತ್ರದ ರಾಮಮೂರ್ತಿನಗರ ಅಂಬೇಡ್ಕರ್ ನಗರ ಸರ್ಕಾರಿ ಶಾಲೆಯಲ್ಲಿ ಕೃಷ್ಣಯ್ಯಶೆಟ್ಟಿ & ಸನ್ಸ್ ಟ್ರಸ್ಟಿನ ಪೌಂಡೇಷನ್ ವತಿಯಿಂದ ನೂತನವಾಗಿ ಆರಂಭಿಸಿರುವ ಗ್ರಂಥಾಲಯವನ್ನು ತ್ರಿವೇಣಿ ವಿನೋದ್, ಚೈತನ್ಯ ವಿ.ಕೊತ, ಹರೀಶ್ ರೆಡ್ಡಿ ಹಾಗು ಎಸ್. ಡಿ.ಎಂ ಸಿ ಮುಖ್ಯಸ್ಥ ಹಿಟ್ಟಾಚ್ಚಿ ಮಂಜುನಾಥ್ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ತ್ರಿವೇಣಿ ವಿನೋದ್ , ಲೈಬ್ರರಿ ಒಂದು ಜ್ಞಾನ ಭಂಡಾರ, ಶಾಲಾ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆಯಲು ತಮ್ಮ ಗುರಿಯನ್ನು ಸಾಧಿಸಲು ಲೈಬ್ರರಿ ಪ್ರಮಖ ಪಾತ್ರ ವಹಿಸಲಿವೆ . ನಮ್ಮ ಪೌಂಡೇಷನ್ ವತಿಯಿಂದ ಹಲವಾರು ಸರ್ಕಾರಿ ಶಾಲೆಗಳಲ್ಲಿ ಈಗಾಗಲೆ ಲೈಬ್ರರಿ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಾಯ ಮಾಡಲು ಕೃಷ್ಣಯ್ಯಶೆಟ್ಟಿ & ಸನ್ಸ್ ಟ್ರಸ್ಟಿನ ಪೌಂಡೇಷನ್ ಸಿದ್ದವಾಗಿದೆ ಎಂದು ತಿಳಿಸಿದರು.
ಎಸ್.ಡಿ.ಎಂಸಿ.ಮುಖ್ಯಸ್ಥರಾದ ಇಟ್ಟಾಚ್ಚಿ ಮಂಜು ಮಾತನಾಡಿ, ಸ್ಥಳೀಯ ಶಾಸಕ ಬೈರತಿ ಬಸವರಾಜ್ ಶಾಲೆಯ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಕೊಡಿಸುವ ಮೂಲಕ ಈ ಶಾಲೆ ಯ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಶಾಸಕರು, ಎನ್.ಜಿ.ಒ ಗಳು ಹಾಗು ಧಾನಿಗಳ ನೆರವಿನಿಂದ ಇಂದು ಅಂಬೇಡ್ಕರ್ ನಗರ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ಪರಿವರ್ತನೆಯಾಗಿದೆ. ಕೃಷ್ಣಯ್ಯಶೆಟ್ಟಿ & ಸನ್ಸ್ ಟ್ರಸ್ಟಿ ಪೌಂಡೇಷನ್ ನಿರ್ಮಾಣ ಮಾಡಿರುವ ಲೈಬ್ರರಿ ಮಕ್ಕಳ ಜ್ಞಾನ ಹೆಚ್ಚಿಸಲು ಸಹಕಾರವಾಗಲಿದ್ದು ಮತ್ತೆ ನಮ್ಮ ಶಾಲೆಗೆ ತಮ್ಮ ಪೌಂಡೇಷನ್ ವತಿಯಿಂದ ಹೆಚ್ಚಿನ ಸಹಕಾರ ನೀಡಲು ಮನವಿ ಮಾಡುವುದಾಗಿ ತಿಳಿಸಿದರು.
ಕೃಷ್ಣಯ್ಯಶೆಟ್ಟಿ & ಸನ್ಸ್ ಟ್ರಸ್ಟಿ ಪೌಂಡೇಷನ್ ನ ಚೈತನ್ಯ, ಹರೀಶ್ ರೆಡ್ಡಿ,ಮುಖ್ಯೋಪಾಧ್ಯಾಯರಾದ ಬಿ.ವಿ.ಭಾರತಿ ಹಾಗು ವಿಜಯಲಕ್ಷ್ಮಿ, ಸಿಆರ್ ಪಿ ವಿಜಯಲಕ್ಷ್ಮಿ ಸೇರಿದಂತೆ 25 ಶಾಲೆಯ ಸಹಶಿಕ್ಷಕರು ಹಾಜರಿದ್ದರು.