ಪ್ರತಿನಿಧಿ ವರದಿ ಮದ್ದೂರು
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಅಂತಿಮವಾಗಿ ನಿಖಿಲ್ ಕುಮಾರಸ್ವಾಮಿ ರವರು ಅಭ್ಯರ್ಥಿಯಾದರೂ ನಮಗೆ ಯಾವುದೇ ಚಿಂತೆಯಿಲ್ಲ ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು.
ತಾಲೂಕಿನ ಕೆಸ್ತೂರು ಬಳಿಯ ಮಾಚಹಳ್ಳಿ ಕೆರೆಯ 1 ಕೋಟಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದ ಮಾತನಾಡಿದರು.
ಸ್ಥಳೀಯರಿಗಿಂತ ಹೊರಗಡೆಯವರೇ ಅಂತಿಮವಾಗಿ ಅಭ್ಯರ್ಥಿಯಾಗುತ್ತಿರುವುದರಿಂದ ನಮ್ಮ ಪಕ್ಷದ ಅಭ್ಯರ್ಥಿ ವೆಂಕಟರಮಣೆಗೌಡ ಸ್ಟಾರ್ ಚಂದ್ರು ಅವರಿಗೆ ಸ್ಪರ್ಧೆ ಕಠಿಣವಾಗುವುದರ ಬದಲು ಸುಲಭವಾದಂತಾಗುತ್ತದೆ ಎಂದು ಪ್ರತಿಕ್ರಿಯಿಸಿದರು.
ಕೆಲವರಿಗೆ ವಯುಕ್ತಿಕವಾಗಿ ಆರೋಗ್ಯದ ಸಮಸ್ಯೆಗಳಿರುತ್ತದೆ ಆದರೆ ಅವುಗಳನ್ನು ಬಹಿರಂಗವಾಗಿ ಯಾರೂ ಹೇಳಿಕೊಳ್ಳುವುದಿಲ್ಲ ಆದರೆ ಇವರು ತಮ್ಮ ಮಗನ ಪರವಾಗಿ ಜನರಲ್ಲಿ ಅನುಕಂಪಗಿಟ್ಟಿಸುವ ಸಲುವಾಗಿ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರವರು ಮಂಡ್ಯದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರ ಬಗ್ಗೆ ಟಾಂಗ್ ನೀಡಿದರು.
ಮುಖಂಡರಾದ ಆರ್.ಸಿ.ಎಸ್ ಶಿವು, ಯರಗನಹಳ್ಳಿ ಹರೀಶ್, ನಟರಾಜ್, ಗೋವಿಂದು, ವೆಂಕಟೇಶ್, ಉಮೇಶ್, ದಾಸೇಗೌಡ, ಪುನೀತ್, ಶಿವರಾಜು, ಕುಮಾರ್ ಸೇರಿದಂತೆ ಇತರರು ಇದ್ದರು.
ಪೋಟೋ
ಮದ್ದೂರು ತಾಲ್ಲೂಕಿನ ಕೆಸ್ತೂರು ಬಳಿಯ ಮಾಚಹಳ್ಳಿ ಕೆರೆಯ 1 ಕೋಟಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ. ಉದಯ್ ಅವರು ಭೂಮಿ ಪೂಜೆಯನ್ನು ನೆರವೇರಿಸಿದರು.
ಬೆಂಗಳೂರು ದಕ್ಷಿಣದಲ್ಲಿ ಎಚ್.ಡಿ. ದೇವೇಗೌಡರ ಅಳಿಯ ಡಾ. ಮಂಜುನಾಥ್ ರಿಗೆ ಬಿಜೆಪಿ ಯಿಂದ ಲೋಕಸಭೆಗೆ ಟಿಕೆಟ್ ಕೊಡಿಸಿರುವುದು ಹಾಸ್ಯಸ್ಪದವಾಗಿದೆ. ಶಾಸಕರು, ಜೆಡಿಎಸ್ ನಿಂದ ಬಿಟ್ಟು ಬಿಜೆಪಿ ಯಿಂದ ಟಿಕೆಟ್ ಕೊಡಿಸಿರುವುದರಿಂದ ಅಲ್ಲಿ ಅವರ ಜೆಡಿಎಸ್ ಪಕ್ಷವು ಬಲಹೀನವಾಗಿದೆ ಎಂದು ಅವರೇ ತಿಳಿಸಿದಂತಾಗಿದೆ.
ಉದಯ್ ಶಾಸಕ