ಪೊನ್ನಂಪೇಟೆ ; ವಿರಾಜಪೇಟೆ ತಾಲೂಕು ತ್ರೈಮಾಸಿಕ ಪರಿಶೀಲನಾ (ಕೆ.ಡಿ.ಪಿ.) ಸಮಿತಿ ಸದಸ್ಯರಾಗಿ ಕಾಂಗ್ರೆಸ್ ಪಕ್ಷದ 6 ಪ್ರಮುಖರನ್ನು ಸರ್ಕಾರದಿಂದ ನಾಮನಿರ್ದೇಶನಗೊಳಿಸಲಾಗಿದೆ.
ಕೆದಮುಳ್ಳೂರು ಗ್ರಾಮದ ಮಾಳೇಟಿರ ಪ್ರಶಾಂತ್ ಉತ್ತಪ್ಪ, ವಿರಾಜಪೇಟೆ ವಿಜಯನಗರದ ಮರ್ವಿನ್ ಲೋಬೊ (ಸಾಮಾನ್ಯ), ಐಮಂಗಲ ಗ್ರಾಮದ ಕೋಳುಮಂಡ ರಫೀಕ್ (ಅಲ್ಪಸಂಖ್ಯಾತ), ಆರ್ಜಿ ಗ್ರಾಮದ ಪಿ. ಎನ್. ಶಶಿಧರನ್ (ಹಿಂದುಳಿದ ವರ್ಗ), ಚೆನ್ನಯ್ಯನಕೋಟೆಯ ಎಚ್.ಬಿ. ಗಣೇಶ್ (ಪರಿಶಿಷ್ಟ ಜಾತಿ) ಮತ್ತು ವಿರಾಜಪೇಟೆ ತೋರೆರ ಜಿ. ಪೊನ್ನಕ್ಕಿ (ಮಹಿಳೆ) ಸದಸ್ಯರಾಗಿದ್ದಾರೆ.
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಸರ್ಕಾರದ 20 ವಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಈ ಸಮಿತಿ ಕಾರ್ಯನಿರ್ವಹಿಸಲಿದ್ದು, ಅಧಿಕಾರೇತರ ಸದಸ್ಯರಾಗಿ ಸರಕಾರ ನಾಮನಿರ್ದೇಶನಗೊಳಿಸಲಾಗಿದೆ. ಈ ಕುರಿತು ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಕ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಮಲ್ಲಿನಾಥ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಫೋಟೋ 16 ಎಂಡಿಕೆ 01 ; ತ್ರೈಮಾಸಿಕ ಪರಿಶೀಲನಾ ಸಮಿತಿ ನಾಮನಿರ್ದೇಶನ ಸದಸ್ಯರು.