ಕೊಳ್ಳೇಗಾಲ ತಾಲೂಕು ಕಚೇರಿಯ ತಹಸೀಲ್ದಾರ್ ಕೊಠಡಿಯಲ್ಲಿ ಶುಕ್ರವಾರ ಬೆಳಗ್ಗೆ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ತಾಲೂಕು ಆಡಳಿತ ಬಾಬೂಜಿ ಅವರ 117ನೇ ಜಯಂತಿಯನ್ನು ಸರಳವಾಗಿ ಆಚರಿಸಿತು.
ಈ ವೇಳೆ ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಎಂ.ಮಂಜುಳಾ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಾ.ನವೀನ್ ಸಿ.ಮಠದ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಎಂ.ಕೇಶವಮೂರ್ತಿ, ಪ್ರಭಾರ ಸಿಡಿಪಿಒ ನಂಜಮಣಿ, ಬಿಇಒ ಮಂಜುಳಾ, ದಲಿತ ಮುಖಂಡರಾದ ಬಾಲರಾಜು, ಸೋಮು, ದೊಡ್ಡಿಂದುವಾಡಿ ಸಿದ್ದರಾಜು, ಭೀಮನಗರದ ಮಾಜಿ ಯಜಮಾನರಾದ ಶಿವಮೂರ್ತಿ, ಕೃಷ್ಣರಾಜ್ ಸೇರಿದಂತೆ ಇತರರು ಇದ್ದರು.
Leave a comment