ವಾರದ ಸಂತೆ ರದ್ದು
ಚಿಕ್ಕಮಗಳೂರು: ಏಪ್ರಿಲ್ 26 ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೂಡಿಗೆರೆ ಪಟ್ಟಣದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿರುವುದರಿಂದ ಅಂದು ಮತದಾನ ನಡೆಸುವ ಸಲುವಾಗಿ ಮೂಡಿಗೆರೆಯ ವಾರದ ಸಂತೆ ರದ್ದು ಪಡಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಪ್ರಾಣಿ ವಧೆ ನಿಷೇಧ
ಚಿಕ್ಕಮಗಳೂರು: ಏಪ್ರಿಲ್ 21 ರಂದು ಮಹಾವೀರ ಜಯಂತಿ ಪ್ರಯುಕ್ತ ಚಿಕ್ಕಮಗಳೂರು ನಗರ ಸಭೆ ವ್ಯಾಪ್ತಿಯಲ್ಲಿ ಇರುವ ಕೋಳಿ, ಕುರಿ, ಮೀನು, ಮಾಂಸ ಮಾರಾಟಗಾರರು ಹಾಗೂ ಮಾಂಸಹಾರಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಕಡ್ಡಾಯವಾಗಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿದೆ.
ಕೋಳಿ, ಕುರಿ, ಮೀನು, ಮಾಂಸ ಮಾರಾಟಗಾರರು ಮತ್ತು ಮಾಂಸಹಾರಿ ಹೋಟೆಲ್ಗಳನ್ನು ತೆರೆಯಬಾರದೆಂದು, ತಪ್ಪಿದಲ್ಲಿ ಅಂತಹ ಮಾಂಸ ಮಾರಾಟ ಮಾಡುವವರ ಮತ್ತು ಮಾಂಸಹಾರಿ ಹೋಟೆಲ್ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
—————————————————–
ಅರ್ಜಿ ಆಹ್ವಾನ
ಚಿಕ್ಕಮಗಳೂರು: 2024-25ನೇ ಸಾಲಿನಲ್ಲಿ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಪ್ರತಿಭಾವಂತ ಪರಿಶಿಷ್ಠ ವರ್ಗದ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮೇ 21 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಯಾಯ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಗ್ರೇಡ್-1 ಮತ್ತು 2 ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
———————————————————
ವಿದ್ಯುತ್ ನಿಲುಗಡೆ
ಚಿಕ್ಕಮಗಳೂರು: ನಗರ ಉಪ ವಿಭಾಗದ ಘಟಕ-1, 2, 3 ಮತ್ತು ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11 ಕೆ.ವಿ. ವಿ ವಿ ಕೇಂದ್ರದಿಂದ ಹೊರಹೊಮ್ಮುವ ಫೀಡರ್ ಮಾರ್ಗಗಳಲ್ಲಿ ಪಾಟ್ಹೆಡ್ ಅಳವಡಿಕೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿದ ಏ.21ರಂದು ಬೆಳಗ್ಗೆ 10ರಿಂದ4 ಗಂಟೆಯವರೆ ಫೀಡರ್ 66/11 ಕೆ.ವಿ. ವಿವಿ ಕೇಂದ್ರದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಸದರಿ ಫೀಡರ್ಗಳ ಪ್ರದೇಶಗಳಾದ ಗೌರಿಕಾಲುವೆ, ಉಪ್ಪಳ್ಳಿ, ವಿಜಯಪುರ, ಐ.ಜಿ. ರಸ್ತೆ, ಬಾರ್ಲೈನ್ ರಸ್ತೆ, ಮಧುವನ ಲೇಜೌಟ್, ಕಲ್ಲುದೊಡ್ಡಿ, ನೆಹರು ನಗರ, ಮೂಗ್ತಿಹಳ್ಳಿ, ಮಲ್ಲಂದೂರು, ಹಿರೇಕೊಳಲೆ, ಕೆಂಪನಹಳ್ಳಿ, ರಾಮನಹಳ್ಳಿ, ಮೌಂಟೇನ್ವ್ಯೂ ಶಾಲೆ, ಡಿ.ಸಿ. ಕಛೇರಿ, ಎಸ್.ಪಿ. ಕಛೇರಿ, ಶಿರವಾಸೆ, ಇಂದಾವರ, ಜೋಳ್ದಾಳ್, ಆವತಿ, ಬಸವನಹಳ್ಳಿ ಮುಖ್ಯ ರಸ್ತೆ, ಆರ್.ಜಿ. ರಸ್ತೆ, ಕೆ.ಎಂ. ರಸ್ತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.