ಮೈಸೂರು : ನಗರದ ಶ್ರೀಚಾಮರಾಜೇಂದ್ರ ಮೃಗಾಲಯವು 69ನೇ ವನ್ಯಜೀವಿ ಸಪ್ತಾಹ ಆಚರಣೆ ಅಂಗವಾಗಿ ನಡೆಸಿದ ಛಾಯಾಗ್ರಹಣ ಸ್ಪರ್ಧೆ ಮತ್ತು ದೊಡ್ಡಬೆಕ್ಕು ಜಾತಿಯ ಪ್ರಾಣಿಗಳ ಅಭಿಯಾನ ಅಂಗವಾಗಿ ನಡೆದ ಚಿತ್ರಕಲೆ ಸ್ಪರ್ಧೆ ವಿಜೇತರ ಪಟ್ಟಿಯನ್ನು ಘೋಷಿಸಿದೆ.
ಡಾ.ಎಚ್.ವಿ. ಸಂತೃಪ್ತ್ ಮತ್ತು ಯಶಸ್ ನಾರಾಯಣ ಅವರು ಛಾಯಚಿತ್ರ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಯ ಮೌಲ್ಯಮಾಪನ ಮಾಡುವ ಮೂಲಕ ವಿಜೇತರನ್ನು ಆಯ್ಕೆ ಮಾಡಲು ಮೈಸೂರು ಮೃಗಾಲಯಕ್ಕೆ ತಮ್ಮ ಸಹಕಾರ ನೀಡಿದ್ದಾರೆ.
69ನೇ ವನ್ಯಜೀವಿ ಸಪ್ತಾಹ ಅಂಗವಾಗಿ ನಡೆದ ಛಾಯಾಗ್ರಹಣ ಸ್ಪರ್ಧೆಯಲ ಇನ್ಸಿಟ್ಯು ಪ್ರವರ್ಗದಲ್ಲಿ ಟಿ.ಪಿ. ವರದನಾಯಕ ಪ್ರಥಮ, ಬಿ.ಎನ್. ಉಮಾಶಂಕರ್ದ್ವಿತೀಯ ಮತ್ತು ಬಿ. ಶಿವಕುಮಾರ್ತೃತೀಯ ಬಹುಮಾನ ಪಡೆದಿದ್ದಾರೆ. ಎಚ್.ಆರ್. ಶಶಾಂಕ್, ಎಸ್.ಆರ್. ಮಧುಸೂದನ್, ಚಿರಾಗ್ ರಾಜ್, ಸಾರ್ ಸುರೇಶ್ಅವರು ಸರ್ಟಿಫಿಕೇಟ್ ಪಡೆದಿದ್ದಾರೆ.
ಎಕ್ಸ್ಸಿಟ್ಯೂ ಪ್ರವರ್ಗದಲ್ಲಿ ಬಿ. ಉಮೇಶ್ ಪ್ರಥಮ, ಕನ್ನಡಪ್ರಭ ದಿನಪತ್ರಿಕೆಯ ಛಾಯಾಗ್ರಾಹಕ ಅನುರಾಗ್ಬಸವರಾಜ್[ಎಂ.ಎಸ್. ಬಸವಣ್ಣ] ದ್ವಿತೀಯ ಬಹುಮಾನ, [ಎಂ.ಆರ್. ರೂಪೇಶ್] ತೃತೀಯ ಬಹುಮಾನ ಪಡೆದಿದ್ದಾರೆ.
ವಿ. ಗಿರೀಧರ, ಜಿ.ಎಸ್. ರವಿಶಂಕರ್, ಎಸ್. ಆರ್. ಮಧುಸೂದನ್ ಮತ್ತು ಸಿ. ವಿಶ್ರುತ್ ಅವರು ಪ್ರಮಾಣ ಪತ್ರ ಪಡೆದಿದ್ದಾರೆ.
ದೊಡ್ಡಬೆಕ್ಕು ಜಾತಿಯ ಪ್ರಾಣಿಗಳ ಅಭಿಯಾನದ ಪ್ರಯುಕ್ತ ಚಿತ್ರಕಲೆ ಸ್ಪರ್ಧೆಯಲ್ಲಿ [10 ರಿಂದ 12ನೇ ತರಗತಿ] ಬಿ. ತೇಜಸ್ವಿ ಪ್ರಥಮ, ಜೆ. ರೇಣು ದ್ವಿತೀಯ ಮತ್ತು ಎಂ.ಆರ್. ಕುಮಾರ್ನಾಯಕ ತೃತೀಯ, 7 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೇಯಸ್ಅನಿಕೇತ್ಜೋಶಿ ಪ್ರಥಮ, ಕೆ. ದೀಕ್ಷ ದ್ವಿತೀಯ, ಸೃಷ್ಟಿ ಪೊನ್ನಪ್ಪ ಅಲೆಮೇಡ ತೃತೀಯ, 5 ರಿಂದ 6ನೇ ತರಗತಿ ವಿಭಾಗದಲ್ಲಿ ಪತ್ರಲಿಕಾ ಮಹಾತ ಪ್ರಥಮ, ಕ್ಷಿತಿ ಎಸ್. ಪಾಟೀಲ್ ದ್ವಿತೀಯ ಮತ್ತು ಮೊಹಮ್ಮದ್ ಫಯಾಜ್ ಅನ್ಸಾರಿ ತೃತೀಯ ಬಹುಮಾನ ಪಡೆದಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಈ ಎಲ್ಲಾ ಛಾಯಾಚಿತ್ರಗಳನ್ನು ವೀಕ್ಷಿಸಿ, ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.