ನಗರದ ಖಾಸಗಿ ಬ್ಯಾಂಕ್ವೊಂದರಲ್ಲಿ (Bank) ನಕಲಿ ಚಿನ್ನ (Fake Gold) ಅಡವಿಟ್ಟು, 39 ಲಕ್ಷದ 59 ಸಾವಿರ ರೂ. ಹಣ ಪಡೆದು ವಂಚಿಸಿದ ಆರೋಪಿ ರಂಗನಾಥ್ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರಂಗನಾಥ್ 3 ಪದರಗಳ ಲೇಪನದ 1 ಕೆಜಿ ನಕಲಿ ಚಿನ್ನದ ಒಡವೆ ಅಡವಿಟ್ಟು ಮೇ 25ರಂದು 39 ಲಕ್ಷ ರೂ. ಸಾಲ ಪಡೆದಿದ್ದನು.
ಬ್ಯಾಂಕ್ ಸಿಬ್ಬಂದಿ ಒಡವೆಯ ಮೊದಲ ಪದರನ್ನು ಪರೀಕ್ಷಿಸಿದಾಗ ಅಸಲಿ ಎಂದು ತಿಳಿದುಬಂದಿದೆ. ಒಂದೆರಡು ತಿಂಗಳ ನಂತರ ಬ್ಯಾಂಕ್ ಆಡಿಟಿಂಗ್ ವೇಳೆ ಮತ್ತೆ ಚಿನ್ನವನ್ನು ಪರೀಕ್ಷಿಸಿದಾಗ ಅನುಮಾನ ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಮೊದಲಿನಿಂದ ಸಂಪೂರ್ಣವಾಗಿ ಚಿನ್ನವನ್ನು ಪರೀಕ್ಷಿಸಿದಾಗ ನಕಲಿ ಎಂದು ತಿಳಿದುಬಂದಿದೆ. ಇನ್ನು ಸಾಲ ಪಡೆದ ಆರೋಪಿ ರಂಗನಾಥ್ ಎರಡೂ ತಿಂಗಳಾದರೂ ಬ್ಯಾಂಕ್ ಕಡೆ ತಲೆ ಹಾಕದಿದ್ದಾಗ, ಸಿಬ್ಬಂದಿ ಅನುಮಾನಗೊಂಡು ಪರೀಕ್ಷೆ ಮಾಡಿದ್ದಾರೆ.