ಪ್ರತಿನಿಧಿ ವರದಿ ಮಂಡ್ಯ
ಜಿಲ್ಲಾಸ್ಪತ್ರೆಯಲ್ಲಿರುವ ಹೆರಿಗೆವಾರ್ಡ್ ಬಳಿಯ ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದಲ್ಲಿ ಸಮಾಜಸೇವಕ ಪುಟ್ಟಸ್ವಾಮಿ ಹೊನ್ನಾವರ ಸ್ನೇಹ ಬಳಗದಿಂದ ಸಮಾಜಸೇವಕ ಪುಟ್ಟಸ್ವಾಮಿ ಹೊನ್ನಾವರ ಅವರ ಜನ್ಮದಿನ ಪ್ರಯುಕ್ತ ಗರ್ಭಿಣಿ-ಬಾಣಂತಿಯರು ಮತ್ತು ಅಗತ್ಯಯುಳ್ಳವರಿಗೆ ಮಧ್ಯಾಹ್ನದ ಪೌಷ್ಠಿಕಾಹಾರ ವಿತರಣೆ ಕಾರ್ಯಕ್ರಮ ನಡೆಯಿತು.
ಸಮಾಜ ಸೇವಕ ಪುಟ್ಟಸ್ವಾಮಿ ಹೊನ್ನಾವರ ಮಾತನಾಡಿ, ನಾನು ಆದಿಚುಂಚನಗಿರಿ ಶ್ರೀಮಠದ ಭಕ್ತನಾಗಿ ನಮ್ಮ ದೊಡ್ಡ ಸ್ವಾಮೀಜಿಗಳಾಗಿದ್ದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ತತ್ವ ಮತ್ತು ಸಿದ್ದಾಂತಗಳನ್ನು ಪಾಲಿಸಿ ಬೆಳೆದವರು, ಅವರಿಂದ ಕಲಿತ ಅನ್ನದಾನದಂದಿ ಪರಮಾನಂದ ಕಾಣುತ್ತಿದ್ದೇವೆ ಎಂದರು.
ನಮ್ಮ ಸ್ನೇಹಿತರು ಒಡಗೂಡಿ ಇಂದು ಸೇವಾಕಾರ್ಯಾದ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ, ಕೇಕ್ ಕಟ್ ಮಾಡಲ್ಲ, ಜನೋಪಯೋಗಿ ಬಸವಸಸ್ಯಗಳನ್ನು ನೀಡುವುದರ ಮೂಲಕ ಹುಟ್ಟಿನ ದಿನವನ್ನು ಸಂಭ್ರಮಿಸುತ್ತಿದ್ದೇವೆ ಎಂದು ನುಡಿದರು.
ಸವಿತಾ ಪುಟ್ಟಸ್ವಾಮಿ, ಸಮರಸೇನೆ ರಾಜ್ಯಾಧ್ಯಕ್ಷ ಸುನೀಲ್ಗೌಡ, ಮಧು, ಶಿಕ್ಷಕ ಚಿಕ್ಕೇಗೌಡ, ಕುಮಾರ್, ಪ್ರಕಾಶ್, ಸದಾನಂದಗೌಡ ಮತ್ತಿತರಿದ್ದರು.