ಪ್ರತಿನಿಧಿ ವರದಿ ನಂಜನಗೂಡು
ಸರ್ಕಾರದ ಪಿಂಚಣಿ ನಂಬಿ, ದಿಕ್ಕೆಟ್ಟ ವಿಶೇಷ ಚೇತನ ಶೀರ್ಷಿಕೆಯಲ್ಲಿ ಮೇ 1ರಂದು ಬುಧವಾರ ಪ್ರತಿನಿಧಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡ ಬೆನ್ನಲ್ಲೇ, ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದ ವಿಶೇಷ ಚೇತನ ರಾಜಶೇಖರ ಮೂರ್ತಿ ಮನೆಗೆ ಕಂದಾಯ ಇಲಾಖೆ ಅಧಿಕಾರಿಗಳು, ಶಿಶು ಅಭಿವೃದ್ಧಿ ಇಲಾಖೆ, ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪಿಂಚಣಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದಿದ್ದಾರೆ.
ಕಂದಾಯ ಇಲಾಖೆ ಸಿದ್ದಾರ್ಥ್, ಗ್ರಾಮ ಸಹಾಯಕಿ ಭಾಗ್ಯ, ಪಂಚಾಯಿತಿ ಬಿಆರ್ ಡಬ್ಲ್ಯೂ ಶೇಖರಪ್ಪ, ಕೋಣನೂರು ಪಿಡಿಒ ಶ್ರೀನಿವಾಸಮೂರ್ತಿ ಮಾಹಿತಿ ಪಡೆದ ಅಧಿಕಾರಿಗಳಾಗಿದ್ದಾರೆ.
ರಾಜಶೇಖರ ಮೂರ್ತಿ ಅವರನ್ನು ಗ್ರಾಮದಲ್ಲಿರುವ ಅಂಚೆ ಕಚೇರಿಗೆ ಕರೆದುಕೊಂಡು ಹೋಗಿ ಖಾತೆಯನ್ನು ಪರಿಶೀಲಿಸಿ, ಪಿಂಚಣಿ ಸ್ಥಗಿತವಾಗಿರುವ ಬಗ್ಗೆ ಅಂಚೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಖಾತೆಗೆ ಸಂಬಂಧಿಸಿದಂತೆ ಆಗಿರುವ ಲೋಪದೋಷಗಳನ್ನು ಸರಿಪಡಿಸಲಾಗಿದ್ದು , ಇನ್ನು ಎರಡು ಮೂರು ದಿನಗಳೊಳಗೆ ಸ್ಥಗಿತ ಕೊಂಡಿರುವ ಪಿಂಚಣಿ ವಿಶೇಷ ಚೇತನ ರಾಜಶೇಖರ ಮೂರ್ತಿ ಅಂಚೆ ಖಾತೆಗೆ ಜಮಾ ಆಗುವಂತೆ ಕ್ರಮ ವಹಿಸಲಾಗಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.