ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಬಳಿ ಇರುವ ಶನಿ ಮಠಕ್ಕೆ ಕಿಡಿಗೇಡಿಗಳಿಂದ ಬೆಂಕಿ ಇಟ್ಟಿರುವ ಘಟನೆ ನಡೆದಿದೆ.
ಬೆಂಕಿಯ ಜ್ವಾಲೆಯಲ್ಲಿ ದೇಗುಲ ಹಾಗು ಗೋಶಾಲೆ ಹೊತ್ತಿ ಉರಿದಿದ್ದು, ಮಧ್ಯರಾತ್ರಿ ಶನಿ ಮಠದ ದೇಗುಲಕ್ಕೆ ಬೆಂಕಿ ಹಾಕಿರುವ ಕಿಡಿಗೇಡಿಗಳು ಕ್ಷಣಮಾತ್ರದಲ್ಲಿ ಎಸ್ಕೇಪ್ ಆಗಿದ್ದಾರೆ. ಸ್ಥಳೀಯರಿಂದ ಮಠದಲ್ಲಿದ್ದ ಗೋಶಾಲೆ ಗೋವುಗಳು ಹಾಗೂ ವೃದ್ದಾಶ್ರಮದದ ಜನರನ್ನ ರಕ್ಷಣೆ ಮಾಡಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆಸಲಾಯ್ತು. ಶನಿಮಠದ ಜಾಗದ ವಿಚಾರವಾಗಿ ವಿವಾದವಿದ್ದು, ಈ ವಿಚಾರಕ್ಕಾಗಿಯೇ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಶನಿಮಠದ ಸ್ವಾಮೀಜಿ ಹಾಗೂ ಧರ್ಮದರ್ಶಿಯಿಂದ ಕಿಡಿಗೇಡಿಗಳ ವಿರುದ್ದ ದೂರು ದಾಖಲಾಗಿದೆ.
ಘಟನೆ ಸಂಬಂಧ ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.