ಶಾಸಕ ಎಚ್.ಡಿ.ರೇವಣ್ಣ ಹೇಳಿಕೆ
ಪ್ರತಿನಿಧಿ ವರದಿ ಬೇಲೂರು
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವದು ನಮ್ಮ ಗುರಿ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು,
ಜೆಡಿಎಸ್ ತಾಲೂಕು ಅಧ್ಯಕ್ಷ ತೋಚ ಅನಂತಸುಬ್ಬರಾಯ ನಿವಾಸದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಬೇಕೆಂದು ನಾವು ಎನ್.ಡಿ.ಎ. ಮೈತ್ರಿಕೋಟ ಮಾಡಿಕೊಂಡಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಸೋಲಿಸಬೇಕು ನಾವು ಪಣ ತೊಟ್ಟಿದ್ದೇವೆ ಎಂದರು.
ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು ತಿಳಿಸಲಿ, ನಾವು ಮಾಡಿದ ಕಾಮಗಾರಿಗಳನ್ನೇ ಮುಚ್ಚಿದ್ದಾರೆ, ಕಾಂಗ್ರೆಸ್ ಸಾಧನೆ ಶೂನ್ಯ, ಜಿಲ್ಲೆಗೆ ಅವರ ಕೊಡುಗೆ ಏನು ಎಂದು ತಿಳಿಸಲಿ, ನಾವು ಮಾಡುವ ಕೆಲಸವನ್ನೇ ತಡೆ ಹಿಡಿದಿದ್ದಾರೆ , ಬಿಜೆಪಿ ಮುಖಂಡರನ್ನು ನಾವು ಭೇಟಿ ಮಾಡಿ ಬೆಂಬಲ ಕೇಳುತ್ತಿದ್ದೇವೆ, ಹೈಕಮಾಂಡ್ ಸೂಚನೆ ಮೇರೆಗೆ ಬಿಜೆಪಿ ಜತೆಗೂಡಿ ಪ್ರಚಾರ ಮಾಡುತ್ತೇವೆ, ಬಿಜೆಪಿ ಜೊತೆ ಒಡಕಿಲ್ಲ, ಎನ್.ಡಿ.ಎ. ಅಭ್ಯರ್ಥಿ ನಾಮ ಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿ, ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗವಹಿಸಲಿದ್ದು, ಅಂದು ಜಿಲ್ಲೆಯ ಎಲ್ಲ ಬಿಜೆಪಿ ಮುಖಂಡರು ಕಾರ್ಯಕರ್ತರು ಒಗ್ಗಟ್ಟಿನ ಪ್ರದರ್ಶನ ತೋರುತ್ತೇವೆ ಎಂದರು.
ಪ್ರಜ್ವಲ್ ಅಭ್ಯರ್ಥಿಗೆ ಕಾನೂನಿನಲ್ಲಿ ಯಾವುದೇ ತೊಡಕಿಲ್ಲ, ಕಾಂಗ್ರೆಸ್ ಪಕ್ಷ ಸೋಶಿಯಲ್ ಮಿಡಿಯದಲ್ಲಿ ನಮ್ಮ ಅಭ್ಯರ್ಥಿ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಕಾಂಗ್ರೆಸ್ ಸಂಸ್ಕೃತಿ ತಿಳಿಸುತ್ತದೆ, ಜಿಲ್ಲೆಯಲ್ಲಿ ಬಿಜೆಪಿ ಜೆಡಿಎಸ್ನಲ್ಲಿ ಯಾವುದೇ ಬಿನ್ನಾಭಿಪ್ರಾಯ ಇಲ್ಲವೆಂದರು,
ಈ ಸಂದರ್ಭ ತಾಲೂಕು ಜೆಡಿಎಸ್ ಅಧ್ಯಕ್ಷ ತೋಚ ಅನಂತ ಸುಬ್ಬರಾವ್, ತಾಲೂಕು ಜೆಡಿಎಸ್ ಪ್ರದಾನ ಕಾರ್ಯದರ್ಶಿ ಸಿ.ಎಚ್.ಮಹೇಶ್, ತಾಲೂಕು ಪಂಚಾಯತಿ ಮಾಜಿ ಸದಸ್ಯ ದೊಡ್ಡವೀರೇಗೌಡ, ಮುಖಂಡರಾದ ಮಹದೇವ್, ಪುರಸಭೆ ಸದಸ್ಯ ಜಗದೀಶ್ ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿಧಿ, ಲೋಕೇಗೌಡ, ನಗರಾಧ್ಯಕ್ಷ ಅಬ್ದುಲ್ ಖಾದರ್, ಮುಖಂಡರಾದ ವೆಂಕಟೇಶ್, ಸತೀಶ್, ರಾಮಚಂದ್ರ, ಮುಂತಾದವರಿದ್ದರು.