ರಾಮಾಪುರ ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಎಂ.ಗುರುದೇವ ಹೇಳಿಕೆ
ನೂತನ ಸಬ್ ಇನ್ಸ್ಪೆಕ್ಟರ್ ಈಶ್ವರ್ ಅವರಿಗೆ ಸ್ವಾಗತ
ಪ್ರತಿನಿಧಿ ವರದಿ ಹನೂರು
ಅಂತರ ರಾಜ್ಯ ತಮಿಳುನಾಡಿಗೆ ಹೊಂದಿಕೊಂಡಂತಿರುವ ರಾಮಾಪುರ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿರುವ ಸಬ್ ಇನ್ಸ್ಪೆಕ್ಟರ್ ಈಶ್ವರ್ ಅವರಿಗೆ ನಮ್ಮ ಸಹಕಾರ ಎಂದಿನಂತೆ ಇರುತ್ತದೆ ಎಂದು ರಾಮಾಪುರ ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಎಂ.ಗುರುದೇವ ಹೇಳಿದರು.
ತಾಲೂಕಿನ ರಾಮಾಪುರ ಪೊಲೀಸ್ ಠಾಣೆಗೆ ನೂತನವಾಗಿ ಬಂದಂತಹ ಸಬ್ ಇನ್ಸ್ಪೆಕ್ಟರ್ ಈಶ್ವರ್ ಅವರನ್ನು ರಾಮಾಪುರ ಬ್ಲಾಕ್ ಕಾಂಗ್ರೇಸ್ ವತಿಯಿಂದ ಸ್ವಾಗತಿಸಿ ನಂತರ ಮಾತನಾಡಿದರು.
ಗುಡ್ಡ ಗಾಡು ಭಾಗದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿಗಳಿದ್ದು ಅದರಂತೆ ನಮ್ಮ ಭಾಗದ ಜನರ ಸೇವೆ ಮಾಡಲು ಬಂದಿದ್ದಾರೆ ಇವರಿಗೆ ನಾವೆಲ್ಲರೂ ಸಹಕಾರ ಕೊಡುವ ಮೂಲಕ ನಮ್ಮ ಜನರ ಬದುಕು ಶಾಂತಿಯುತವಾಗಿರಿಸುವಲ್ಲಿ ಮುಂದಾಗೋಣ ಎಂದರು.
ನೂತನ ಸಬ್ ಇನ್ಸ್ಪೆಕ್ಟರ್ ಈಶ್ವರ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಅತ್ಯಂತ ಹೆಚ್ಚಿನ ರೀತಿಯಲ್ಲಿ ಜನರ ಸೇವೆ ಮಾಡಲು ನಾನು ಸಹ ಮುಂದಾಗಿದ್ದು ಈ ಹಿಂದೆ ಮಾಡಿರುವ ಅಧಿಕಾರಿಗಳ ಹಾಗೆಯೇ ನಾನು ಸಹ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು.
ರಾಮಾಪುರ ಬ್ಲಾಕ್ ಕಾಂಗ್ರೇಸ್ ನ ಪರಿಶಿಷ್ಟ ಜಾತಿ ವಿಭಾಗದ ಸರೋಜ, ಸರದಾರ್, ಹಾಗೂ ದಿನೇಶ್, ಇನ್ನಿತರರು ಉಪಸ್ಥಿತರಿದ್ದರು.