ಪ್ರತಿನಿಧಿ ವರದಿ ಬನ್ನೂರು
ಪಟ್ಟಣದ ಶ್ರೀ ಕೋದಂಡರಾಮ ದೇವಾಲಯದಲ್ಲಿ ಶ್ರೀ ರಾಮನವಮಿ ಅಂಗವಾಗಿ ಬುಧವಾರ ಶ್ರೀರಾಮನಿಗೆ ಸುಗಂಧ ಅಲಂಕಾರವನ್ನು ಮಾಡಲಾಗಿತ್ತು.
ಪ್ರಾತಃ ಕಾಲದಲ್ಲಿ ದೇವಾಲಯವನ್ನು ತಳಿರು ತೋರಣದಿಂದ ಸಿಂಗರಿಸಿ, ರಾಜ ಗೋಪುರವನ್ನು ವಿದ್ಯುತ್ ದೀಪದಿಂದ ಅಲಂಕರಿಸಿ, ಮಂಗಳವಾದ್ಯ, ವೇದ ಮಂತ್ರ ಗೋಷದೊಂದಿಗೆ ಶ್ರೀ ಕೋದಂಡರಾಮನಿಗೆ ಪೂಜೆ ಸಲ್ಲಿಸಲಾಯಿತು.
ನಂತರ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಹೋಮ ಹವನವನ್ನು ನೆರವೇರಿಸಿ, ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಬಂದಿದಂತ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ವಿಜೃಂಭಣೆಯಿಂದ ನಡೆಯಿತು. ಸುತ್ತಮುತ್ತಲ ಗ್ರಾಮದಿಂದ ಭಕ್ತರು ಆಗಮಿಸಿ ಬೆಳಗ್ಗೆ 5 ರಿಂದ ರಾತ್ರಿಯವರೆಗೂ ದೇವರ ದರ್ಶನ ಪಡೆದು ಪುನೀತರಾದರು. ಪ್ರಧಾನ ಅರ್ಚಕ ಕೃಷ್ಣಸ್ವಾಮಿ, ಶ್ರೀನಿವಾಸ್, ಮುರಳಿ, ಶ್ರೀಕಾಂತ್, ಶ್ರೀನಾಥ, ಸುಧನ್ವ ಭಾರಧ್ವಜ ಉಪಸ್ಥಿತರಿದ್ದರು.
Caption- ಬನ್ನೂರಿನ ಶ್ರೀ ಕೋದಂಡರಾಮ ದೇವಾಲಯದಲ್ಲಿ ಶ್ರೀ ರಾಮನವಮಿ ಅಂಗವಾಗಿ ಬುಧವಾರ ಶ್ರೀರಾಮನಿಗೆ ಸುಗಂಧ ಅಲಂಕಾರವನ್ನು ಮಾಡಲಾಗಿತ್ತು. ಪ್ರಧಾನ ಅರ್ಚಕ ಕೃಷ್ಣಸ್ವಾಮಿ, ಶ್ರೀನಿವಾಸ್, ಮುರಳಿ, ಶ್ರೀಕಾಂತ್, ಶ್ರೀನಾಥ ಉಪಸ್ಥಿತರಿದ್ದರು
.
ಬನ್ನೂರಿನಲ್ಲಿ ಶ್ರೀ ರಾಮನವಮಿ ಅಂಗವಾಗಿ ಶ್ರೀಕೋದಂಡರಾಮ ದೇವರ ಉತ್ಸವ ಮೂರ್ತಿಯನ್ನು ಅದ್ದೂರಿಯಾಗಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಅರ್ಚಕ ಶ್ರೀನಾಥ, ಸುಧನ್ವ ಭಾರಧ್ವಜ ಇದ್ದರು.
.