ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಬುಧವಾರ ಹೊಟ್ಟೆನೋವು ತಾಳಲಾರದೆ ಕ್ರಿಮಿನಾಶಕ ಔಷಧ ಸೇವಿಸಿ ವ್ಯಕ್ತಿಯೊರ್ವ ಮೃತಪಟ್ಟಿದ್ದಾನೆ.
ದೊಡ್ಡಿಂದುವಾಡಿ ಗ್ರಾಮದ ನಿವಾಸಿ ನಿಂಗರಾಜುಶೆಟ್ಟಿ(55) ಮೃತ ವ್ಯಕ್ತಿ. ಈತನಿಗೆ ಆಗಾಗ್ಗೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಆದರೂ, ವೈದ್ಯರ ಬಳಿ ತೆರಳಿ ಅಗತ್ಯ ಚಿಕಿತ್ಸೆ ಪಡೆಯದೆ ಹೊಟ್ಟೆನೋವು ಹೋಗಲಾಡಿಸಿಕೊಳ್ಳಲು ಮೆಡಿಕಲ್ನಲ್ಲಿ ಮಾತ್ರೆ ಖರೀದಿಸಿ ಸೇವಿಸುತ್ತಿದ್ದನು.
ಆದರೆ, ಇದಕ್ಕೂ ಹೊಟ್ಟೆನೋವು ಕಡಿಮೆಯಾಗದ ಹಿನ್ನೆಲೆ ಬುಧವಾರ ಬೆಳೆಗೆ ಮನೆಯಲ್ಲಿದ್ದ ಕ್ರಿಮಿ ನಾಶಕ ಔಷಧವನ್ನು ಸೇವನೆ ಮಾಡಿದ್ದಾನೆ. ಈ ವಿಷಯ ತಿಳಿದ ಕುಟುಂಬದವರು ತಕ್ಷಣವೇ ಸಮೀಪದ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರು. ಇಲ್ಲಿ ಚಿಕಿತ್ಸೆಗೆ ಸ್ಪಂದಿಸದ ಆತ ಮೃತಪಟ್ಟಿದ್ದಾನೆ.
ಈ ಕುರಿತು ಮೃತನ ಪುತ್ರ ಪ್ರಕಾಶ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಎಸೈ ಮಲ್ಲಿಕಾರ್ಜುನಸ್ವಾಮಿ ಪ್ರಕರಣ ದಾಖಲಿಸಿಕೊಂಡಿದ್ದು, ಪಿಎಸೈ ಎಸ್.ಎ.ಸುಪ್ರಿತ್ ತನಿಖೆ ಕೈಗೊಂಡಿದ್ದಾರೆ.