ಮಳವಳ್ಳಿ: ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿದ್ದ ಸರ್ವೆ ಗಿಡಗಳಿಗೆ ಸೋಮವಾರ ಆಕಸ್ಮಿಕವಾಗಿ ತಗುಲಿದ್ದ ಬೆಂಕಿ ನಂದಿಸಲು ಹೋಗಿ ವ್ಯಕ್ತಿಯೊಬ್ಬ ಸಜೀವ ದಹನವಾಗಿದ್ದಾರೆ.
ಗ್ರಾಮದ ನಿಂಗಯ್ಯ(70) ಮೃತರು. ರೈತರೊಬ್ಬರ ಜಮೀನಿನ ಸರ್ವೆ ಗಿಡಗಳಿಗೆ ಬೆಂಕಿ ಕಾಣಿಸಿಕೊಂಡಿದೆ. ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನಿಂಗಯ್ಯ ಬೆಂಕಿ ನಂದಿಸಲು ತೋಟದೊಳಗೆ ಹೋಗಿದ್ದಾರೆ. ಬೆಂಕಿಯ ಜ್ವಾಲೆಗೆ ಸಿಲುಕಿಕೊಂಡು ಹೊರಬರಲಾರದೇ ಸಜೀವವಾಗಿ ಸುಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಖಲಾಗಿದೆ.