ಬೆಂಗಳೂರು: ಬೆಂಗಳೂರು ಮೂರು ಲೋಕಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರನ್ನು ಹೊತ್ತ ವಿಶೇಷ ರೈಲೊಂದು ಬುಧವಾರ ಬೆಳಗಿನ ಜಾವ 3.40ಕ್ಕೆ ನಗರದ ವಿಶ್ವೇಶ್ವರಯ್ಯ ವಿಮಾನ ನಿಲ್ದಾಣದಿಂದ ರಾಮನ ಊರು ಅಯೋಧ್ಯೆಗೆ ತೆರಳಿತು. ರೈಲ್ವೇ ಇಲಾಖೆ ಮೂಲಗಳ ಪ್ರಕಾರ ಟ್ರೈನು ಫೆಬ್ರುವರಿ 16, ಮಧ್ಯಾಹ್ನದ ಸಮಯ ಪವಿತ್ರ ನಗರಿಯ ಅಯೋಧ್ಯೆ ಧಾಮ ತಲುಪಲಿದೆ. ಮರುದಿನ ಬೆಳಗ್ಗೆ ಅಂದರೆ ಫೆಬ್ರವರಿ 17 ಬೆಳಗ್ಗೆ ಅಯೋಧ್ಯೆ ಧಾಮದಿಂದ ವಾಪಸ್ಸು ಬರುವ ಇದೇ ರೈಲು ಫೆಬ್ರುವರಿ 20 ಬೆಳಗ್ಗೆ ಬೆಂಗಳೂರು ನಗರ ತಲುಪಲಿದೆ. ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿನ ಸಂಸದ ಪಿಸಿ ಮೋಹನ್ (PC Mohan) ವಿಶೇಷ ರೈಲಿಗೆ ಚಾಲನೆ ನೀಡಿದರು. ನಗರದ ಮೂರು ಲೋಕಸಭಾ ಕ್ಷೇತ್ರಗಳ ಸುಮಾರು 1,450 ಬಿಜೆಪಿ ಕಾರ್ಯಕರ್ತರು ಬಾಲರಾಮನ ದರ್ಶನಕ್ಕೆ ತೆರಳಿದ್ದಾರೆ.