ಮಂಡ್ಯ : ನಾನು ಯಾವುದೇ ಚುನಾವಣಾ ಪ್ರಚಾರಕ್ಕೆ ಹೋಗಲ್ಲ. ಸದ್ಯಕ್ಕೆ ಯಾವುದೇ ಐಡಿಯಾ ನನ್ನಲಿಲ್ಲ, ಪದೇ ಪದೇ ಕೇಳಬೇಡಿ ಎಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ. ಮಂಡ್ಯದ ಕೆರಗೋಡು ಗ್ರಾಮದಲ್ಲಿ ಮಾತನಾಡಿದ ಅವರು, ನನ್ನದು ಸಿನಿಮಾ, ಸಿನಿಮಾ ನನ್ನ ಬದುಕು ಅಷ್ಟೆ. ಮಹಾ ಶಿವರಾತ್ರಿ ದಿನ ಒಳ್ಳೆಯ ಕಾರ್ಯಕ್ರಮಕ್ಕೆ ಕರೆದಿದ್ರು ಬಂದೆ ಅಷ್ಟೆ. ಪಂಚಲಿಂಗೇಶ್ವರನ ದರ್ಶನ ಪಡೆದೆ, ಶಿವರಾತ್ರಿ ಸ್ಪೆಷಲ್ ಒಳ್ಳೆಯ ಕಾರ್ಯಕ್ರಮ ಇದಾಗಿತ್ತು. ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲ್ಲ ಸ್ಟಾರ್ ಚಂದ್ರು ಗೆ ಒಳ್ಳೆಯದಾಗಲಿ ಎಂದು ಹೇಳಿದರು. ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಾಲಿ ಧನಂಜಯ್ ಭೇಟಿ ವಿಚಾರಕ್ಕೆ ಮಾತನಾಡಿ ಚಲನಚಿತ್ರೋತ್ಸವದ ಹಿನ್ನಲೆಯಲ್ಲಿ ಭೇಟಿ ಮಾಡಿದ್ದು ಅಷ್ಟೆ. ಚುನಾವಣೆಯಲ್ಲಿ ಯಾರೆಲ್ಲ ಸ್ಪರ್ಧೆ ಮಾಡ್ತಿದ್ದಾರೆ ಅವರಿಗೆಲ್ಲ ಆಲ್ ದಿ ಬೆಸ್ಟ್ ಒಳ್ಳೆಯದಾಗಲಿ. ಅಧಿಕಾರಕ್ಕೆ ಬರುವವರು ಒಳ್ಳೆಯ ಆಡಳಿತ ಕೊಡಿ, ವಿರೋಧ ಪಕ್ಷಕ್ಕೆ ಯಾರು ಬರ್ತಾರೆ ಅವರು ಕೂಡ ಒಳ್ಳೆಯ ಕೆಲಸ ಮಾಡಿ.ಈ ಸಮಾಜದಲ್ಲಿ ಎರಡೂ ಇಂಪಾರ್ಟೆಂಟ್ ಒಳ್ಳೆಯದಾಗಲಿ. ಚುನಾವಣೆ ಪ್ರಚಾರ ಮಾಡಲ್ಲ, ಎಂಎಲ್ ಎ ಚುನಾವಣಾ ವೇಳೆ ಕರೆದಿದ್ರು ನಾನು ಹೋಗಿಲ್ಲ ಎಂದರು.