ಮೈಸೂರು: ಯದುವೀರ್ ಮಣಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಲಾಗಿದ್ದು, ಸಿಎಂ ನಂತರ ನಾಳೆ ಮೈಸೂರು ಅಖಾಡಕ್ಕೆ ಡಿಕೆಶಿ ಎಂಟ್ರಿ ಕೊಡುತ್ತಿದ್ದಾರೆ. ನಾಳೆ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ. ಈಗಾಗಲೇ ಯದುವೀರ್ ವಿರುದ್ಧ ಒಕ್ಕಲಿಗ ಅಸ್ತ್ರ ಪ್ರಯೋಗ ಮಾಡಲಾಗಿದ್ದು, ಹೀಗಾಗಿ ಒಕ್ಕಲಿಗ ಮತಗಳ ಬೇಟೆಗೆ ಸ್ವತಃ ಡಿಕೆ ಶಿವಕುಮಾರ್ ಅವರೇ ಫೀಲ್ಡ್ ಗಿಳಿಯುತ್ತಿದ್ದಾರೆ. ಶತಾಯಗತಾಯ ಮೈಸೂರು ಕ್ಷೇತ್ರ ಗೆಲ್ಲಲು ವ್ಯೂಹ ರಚಿಸುತ್ತಿರುವ ಸಿಎಂ, ಒಕ್ಕಲಿಗ+ ಅಹಿಂದ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಇದರ ಜತೆ ಬ್ರಾಹ್ಮಣ ಮತ್ತು ಲಿಂಗಾಯತ ಮತಗಳಿಗೆ ಸ್ಥಳೀಯ ಮುಖಂಡರಿಗೆ ಗಾಳ ಹಾಕಲಾಗಿದ್ದು, ಮೈಸೂರು ಅಖಾಡ ತೀವ್ರ ಕುತೂಹಲಕ್ಕೆ ಕಾರಣವಾಗುತ್ತಿದೆ.