ಮೈಸೂರು: ಯದುವೀರ್ ಗೆ ಬಿಜೆಪಿ ಟಿಕೆಟ್ ಹಿನ್ನೆಲೆ ಕಾಂಗ್ರೆಸ್ ನಲ್ಲಿ ತಂತ್ರಗಾರಿಕೆ ಬದಲಾಗಿದ್ದು, ಬಿಜೆಪಿ ಒಕ್ಕಲಿಗ ಮುಖಂಡ , ಮಾಜಿ ಶಾಸಕ ವಾಸು ಪುತ್ರ ಕವೀಶ್ ಗೌಡಗೆ ಗಾಳ ಹಾಕಲು ಕಾಂಗ್ರೆಸ್ ಮುಂದಾಗಿದೆ. ಮೈಸೂರು- ಕೊಡಗು ಅತಿ ಹೆಚ್ಚು ಒಕ್ಕಲಿಗ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಈ ಕಾರಣದಿಂದ ಒಕ್ಕಲಿಗರು ಹಾಗೂ ಅಹಿಂದ ಮತಗಳನ್ನು ಒಗ್ಗೂಡಿಸಿ ಬಿಜೆಪಿಗೆ ಟಕ್ಕರ್ ಕೊಡಲು ಪ್ಲಾನ್ ನಡೆಸಲಾಗುತ್ತಿದೆ. ಈಗಾಗಲೇ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕವೀಶ್ ಗೌಡ ಸ್ಪರ್ಧೆ ಮಾಡಿ 50 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದರು. ಇದೀಗ ಈ ಕಾರಣದಿಂದಾಗಿ ಕವೀಶ್ ಗೌಡ ಸೂಕ್ತ ಅಭ್ಯರ್ಥಿ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಹಿರಿಯ ಮುಖಂಡರು ಬಂದಿದ್ದಾರೆ.