ಮೈಸೂರು: ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಪ್ರತಾಪ್ ಸಿಂಹ ಬೆಂಬಲಿಗರಿಂದ ಬೈಕ್ ಜಾಥಾ ನಡೆಸಲಾಯಿತು. ಮೈಸೂರು ರಿಂಗ್ ರಸ್ತೆಯಲ್ಲಿ ಪೊಸ್ಟರ್ ಹಿಡಿದು ಬೈಕ್ ರ್ಯಾಲಿ ಮಾಡಿದ ಬೆಂಬಲಿಗರು ರಸ್ತೆಯುದ್ದಕ್ಕೂ ಪ್ರತಾಪ್ ಸಿಂಹಗೆ ಜೈಕಾರ ಹಾಕಿ ಯದುವೀರ್ ಬೇಡ, ಪ್ರತಾಪ್ ಸಿಂಹ ಬೇಕು ಎಂದು ಘೋಷಣೆ ಕೂಗಿದರು.