ಮೈಸೂರು: ಮೈಸೂರು–ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರಿಂದ ಮತಬೇಟೆ ಮುಂದುವರೆದಿದ್ದು, ಇಂದು ಹುಣಸೂರು ತಾಲೂಕಿನಲ್ಲಿ ಮತಯಾಚನೆ ಮಾಡಿದ್ದಾರೆ. ಮೊದಲಿಗೆ ಗದ್ದಿಗೆ ಕೆಂಡಗಣ್ಣಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ ಯದುವೀರ್ ಗೆ ಬಿಜೆಪಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ಕೋರಿದರು. ಬಳಿಕ ಗದ್ದಿಗೆ ದರ್ಶನ ಮಾಡಿ ವಿಶೇಷ ಪೂಜೆಯನ್ನು ಯದುವೀರ್ ಸಲ್ಲಿಸಿದರು. ಇನ್ನು ಪ್ರಚಾರದ ವೇಳೆ ಜೆಡಿಎಸ್ ಮುಖಂಡರಾಗಲಿ, ಕಾರ್ಯಕರ್ತರಾಗಲಿ ಕಾಣಿಸಿಕೊಳ್ಳಲಿಲ್ಲ.