ಮೈಸೂರು : ಎಲ್ಲಾ ಸಮಸ್ಯೆಗಳು ಮೋದಿಯವರೇ ಪರಿಹಾರ. ಮೋದಿ ಅವರ ಕೆಲಸ, ಕಾರ್ಯ ವೈಖರಿಯೇ ನಮಗೆಲ್ಲಾ ಸ್ಫೂರ್ತಿ ಎಂದು ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಹೇಳಿದರು. ‘ನಾನು ಅಭ್ಯರ್ಥಿಯಾದ ಬಳಿಕ ಅನೇಕ ಪ್ರಶ್ನೆಗಳನ್ನ ಎದುರಿಸಬೇಕಾದ ಅನಿವಾರ್ಯತೆ ಬಂತು. ಮಹರಾಜರು ಯಾವ ಕಾರಣಕ್ಕೆ ರಾಜಕೀಯಕ್ಕೆ ಬಂದಿದ್ದಾರೆ ಅಂದ್ರು. ಇದೆಲ್ಲವನ್ನ ಹೊರತುಪಡಿಸಿ ಮೋದಿಯವರ ಕೆಲಸ ನಾನು ರಾಜಕೀಯಕ್ಕೆ ಬರಲು ಪ್ರೇರಣೆಯಾಯಿತು. ನಮ್ಮ ಅರಸು ಸಮುದಾಯ ಕೂಡ ಒಬಿಸಿ ಒಳಗಡೆ ಬರುತ್ತದೆ. ಕೆಲವರು ಮಹರಾಜರು ಅರಮನೆಯಿಂದ ಹೊರಗೆ ಬಂದು ಕೆಲಸ ಮಾಡುತ್ತಾರಾ ಎಂದ್ರು. ನಾನೇ ಅರಮನೆಯಿಂದ ಆಚೆ ಬಂದಿದ್ದೇನೆ. ನನ್ನ ಕಚೇರಿಯನ್ನ ಸಹ ತೆರೆದಿದ್ದೇನೆ. ಅದು ನನ್ನ ಕಚೇರಿಯಲ್ಲ ನಿಮ್ಮ ಕಚೇರಿ ಅಂದುಕೊಳ್ಳಿ. ದಸರಾ ವೇಳೆ ಅರಮನೆ ಹಾಗೂ ದೇವಸ್ಥಾನಗಳಿಗೆ ಆಗಮಿಸಿ. ಯಾವುದೇ ಯಶಸ್ಸು ಸಿಕ್ಕರು ಅದು ನಿಮ್ಮ ಯಶಸ್ಸು ಎಂದು ಭಾವಿಸಿ ಎಂದು ಯದುವೀರ್ ಒಡೆಯರ್ ಹೇಳಿದರು.