ತುಮಕೂರು : ತ್ರಿವಿಧ ದಾಸೋಹಿ, ವಿಶ್ವಕಂಡ ಸಂತ, ನಡೆದಾಡಿದ್ದ ದೇವರು ಐಕ್ಯರಾಗಿ ಐದು ವರ್ಷಗಳು ಕಳೆದಿವೆ. ಇಂದು ಶಿವಕುಮಾರ್ ಶ್ರೀ ಗಳ ಐದನೇ ಪುಣ್ಯ ಸ್ಮರಣೆ ಹಿನ್ನೆಲೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪೂಜಾ ಕೈಂಕರ್ಯಗಳು ಅದ್ದೂರಿಯಾಗಿ ನಡೆದಿವೆ. ರುದ್ರಾಭಿಷೇಕ, ಅಷ್ಟೋತ್ತರ ಪೂಜೆ ಮಹಾಮಂಗಳಾರತಿ ಸೇರಿದಂತೆ ಹಲವು ಪೂಜೆ ನಡೆದಿದೆ. ಬೆಳಿಗ್ಗೆ 8.30 ರ ಬಳಿಕ ಶಿವಕುಮಾರ್ ಶ್ರೀ ಗಳ ಪುತ್ಥಳಿ ಮೆರವಣಿಗೆ ನಡೆಯಿತು. ಬೆಳಿಗ್ಗೆ 11.30 ರ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ.