ಮೈಸೂರು: ಕೋಲಾರದಲ್ಲಿ ರಾಮನ ಫ್ಲೆಕ್ಸ್ ಹರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೆ ರಾಮನಿಗೆ ಮನ್ನಣೆ ಇಲ್ಲ ಅನ್ನೋದು ಸಾಬೀತಾಗಿದೆ. ರಾಮಸೇತು ಪ್ರಕರಣದಲ್ಲಿ ಕಾಂಗ್ರೆಸ್ ಅಫಿಡೆವಿಟ್ ಸಲ್ಲಿಸಿತ್ತು.ಕಪಿಲ್ ಸಿಬಲ್ ಮೂಲಕ ರಾಮ ಕಾಲ್ಪನಿಕ ವ್ಯಕ್ತಿ ಅಂತ ಸುಪ್ರೀಂಕೋರ್ಟ್ನಲ್ಲಿ ವಾದ ಮಾಡಿಸಿತ್ತು. ಕರ್ನಾಟಕದಲ್ಲೂ ರಾಮನ ಆಶಯಕ್ಕೆ ಅನುಗುಣವಾದ ಸರ್ಕಾರ ಇಲ್ಲ. ಅದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.
ಇನ್ನು ಮೈಸೂರು- ಅಯೋಧ್ಯೆ ನಡುವೆ ರೈಲು ಸಂಪರ್ಕ ವಿಚಾರಕ್ಕೆ ಮಾತನಾಡಿ ಫೆ.4ರಿಂದ ರೈಲು ಸಂಚಾರ ಆರಂಭ ಆಗಲಿದೆ. 15 ದಿನಕ್ಕೊಮ್ಮೆ ರೈಲು ಸಂಚರಿಸಲಿದೆ.1280 ಆಸನಗಳ ವ್ಯವಸ್ಥೆ ಇದೆ. ಇನ್ನೂ ಬುಕ್ಕಿಂಗ್ ಶುರುವಾಗಿಲ್ಲ. ಶೀರ್ಘದಲ್ಲೇ ಬುಕಿಂಗ್ಗೆ ಅವಕಾಶ ನೀಡಲಾಗುವುದು. ಆಸಕ್ತರು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು.