ಮೈಸೂರು: ಸಂಸದ ಪ್ರತಾಪ್ ಸಿಂಹರಿಗೆ ಟಿಕೆಟ್ ನೀಡುವಂತೆ ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯಿಂದ ಒತ್ತಾಯ ಮಾಡಲಾಯಿತು. ಈ ಬಗ್ಗೆ ಒಕ್ಕಲಿಗರ ಯುವ ಮುಖಂಡ ಸತೀಶ್ ಗೌಡ ಮಾತನಾಡಿ ಒಕ್ಕಲಿಗ ಸಮುದಾಯದ ತಾಳ್ಮೆ ಕೆಣಕುವ ಕೆಲಸ ಬಿಜೆಪಿ ಮಾಡುತ್ತಿದೆ. ಇರುವ ಒಕ್ಕಲಿಗ ಸಂಸದನನ್ನು ತೆಗೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಬೇರೆ ಕ್ಷೇತ್ರದಲ್ಲಿ ಒಕ್ಕಲಿಗರ ಹೆಚ್ಚಿದ್ದರು ಸುಮ್ಮನಿದ್ದೇವೆ. ಆದ್ರೆ ಒಕ್ಕಲಿಗರಿಗೆ ಇರುವ ಕ್ಷೇತ್ರ ಕಿತ್ತುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ಇದೀಗ ಯದುವೀರ್ ಹೆಸರು ಕೇಳಿ ಬರುತ್ತಿದೆ. ಆದ್ರೆ ರಾಜಮನೆತನಕ್ಕೆ ನಮ್ಮ ವಿರೋಧ ಇಲ್ಲ. ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿ. ಈ ಹಿಂದೆ ವಿಶ್ವನಾಥ್ ಒಕ್ಕಲಿಗರ ಮೇಲೆ ಮಾತನಾಡುತ್ತಿದ್ದ ಕಾರಣ ಪ್ರತಾಪ್ ಸಿಂಹಗೆ ಸಮುದಾಯ ಅವರ ಪರವಾಗಿ ನಿಂತಿತ್ತು. ಆದಾದ ನಂತರ ಗೆದ್ದು ಅವರು ಸುಮ್ನನೆ ಕುಳಿತಿಲ್ಲ.ನಾವುಗಳು ಅವರ ಹಲವು ವಿಚಾರಕ್ಕೆ ಟೀಕೆ ಮಾಡಿದ್ದೇವೆ. ಆದ್ರೆ ಅಭಿವೃದ್ಧಿ ವಿಚಾರವಾಗಿ ಅವರು ರಾಜಿಯಾಗಿಲ್ಲ. ಅಭಿವೃದ್ಧಿ ಕೆಲಸದ ವಿಚಾರವಾಗಿ ಪ್ರತಾಪ್ ಸಿಂಹ ಯಾರ ಕಾಲಿಗಾದರೂ ಬಿದ್ದು ಕೆಲಸ ಮಾಡಿಸುತ್ತಾರೆ. ರಾಜ ವಂಶಸ್ಥ ಯದುವೀರ್ ಅವರಿಂದ ಇದು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.