ಮೈಸೂರು: ಶಾಲೆಯ ಬಾಗಿಲು ಮೀಟಿ ಆಹಾರ ಪದಾರ್ಥಗಳು, ಅಡುಗೆ ಪಾತ್ರೆಗಳನ್ನು ಕಳ್ಳತನ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ತಗಡೂರು ಗ್ರಾಮದ ಗುರುಮಲ್ಲೇಶ್ವರ ಅನುದಾನಿತ ಬಾಲಕಿಯರ ಪ್ರೌಢ ಶಾಲೆಯಲ್ಲಿ ನಡೆದಿದೆ. ಶಾಲೆಯ ತಂತಿ, ಬೇಲಿ, ಕಛೇರಿಯ ಬೀಗ ಹೊಡೆದು, ಬೀರು ಲಾಕರ್ ಮೀಟಿ ಅಡುಗೆ ಪಾತ್ರೆಗಳು, ಆಹಾರ ಪದಾರ್ಥಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಅಲ್ಲದೆ ಶಾಲೆಯ ಆವರಣದಲ್ಲೇ ಕುಡಿದು ಮದ್ಯದ ಬಾಟಲ್ಗಳನ್ನು ಕಿಡಿಗೇಡಿಗಳು ಬಿಸಾಡಿದ್ದಾರೆ. ಸ್ಥಳಕ್ಕೆ ಕವಲಂದೆ ಪೊಲೀಸ್ ಠಾಣೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.