ಮೈಸೂರು: ಕರ್ನಾಟಕ ಬಿಜೆಪಿಯಲ್ಲಿ ಎಲ್ಲಿಯೂ ಬಂಡಾಯ ಇಲ್ಲ. ಶಿವಮೊಗ್ಗ ಹಾಸನದ ವಿಚಾರ ಇವತ್ತಿನ ವಿಚಾರ ನೀವು ಮಾತನಾಡುತ್ತಿದ್ದೀರ. ನಾನು ಹೇಳುತ್ತಿರುವುದು ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ಸತ್ಯ ಎಂದು ಮೈಸೂರಿನಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಹೇಳಿದರು. ನಗರದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ಅಷ್ಟೊತ್ತಿಗೆ ನಮ್ಮಲ್ಲಿ ಯಾವ ಬಂಡಾಯ ಇರುವುದಿಲ್ಲ. ಈಶ್ವರಪ್ಪ ನಮ್ಮ ಪಕ್ಷದ ದೊಡ್ಡ ನಾಯಕ. ಅದು ನಮಗೂ ಗೊತ್ತು ಅವರಿಗು ಗೊತ್ತು. ಅವರು ಪ್ರಚಾರ ಶುರು ಮಾಡಿದ್ದಾರೆ. ಅದರ ಅಂತಿಮವಾಗಿ ನಮಗೆ ಆಗುತ್ತದೆ. ಪ್ರಚಾರ ಮಾಡಲಿ ಬಿಡಿ. ಎಲ್ಲಾ ಸಮಸ್ಯೆಗಳು ಬಗೆ ಹರಿಯುತ್ತದೆ. ಸುಮಲತಾ ನಮ್ಮ ಪಕ್ಷದ ಬೆಂಬಲಿಗರು. ಅವರು ಈ ಚುನಾವಣೆಗೆ ನಮ್ಮ ಅಭ್ಯರ್ಥಿಗೆ ಕೆಲಸ ಮಾಡುತ್ತಾರೆ ಎಂದು ಹೇಳಿದರು.