ಮಂಡ್ಯ : ರೈತನ ಜಮೀನಿನಲ್ಲಿ ವಾಮಾಚಾರ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ. ಬೆಳಗೊಳ ಗ್ರಾ.ಪಂ.ಅಧ್ಯಕ್ಷ ಸುರೇಶ್ ರವರ ಜಮೀನಿನಲ್ಲಿ ವಾಮಾಚಾರ ನಡೆದಿದ್ದು, ಜಮೀನಿನ ಮಧ್ಯ ಭಾಗ ವಾಮಾಚಾರದ ಕುರುಹು ಪತ್ತೆಯಾಗಿದೆ. ವಾಮಾಚಾರಕ್ಕೆ ನಿಂಬೆಹಣ್ಣು ಕುಡಿಕೆ,ರಕ್ತ, ತಗಡು,ಅರಿಶಿನ ಕುಂಕುಮ ಪತ್ತೆಯಾಗಿದ್ದು, ತಮ್ಮ ಜಮೀನಿನಲ್ಲಿ ವಾಮಾಚಾರ ನಡೆಸಿರೋದಕ್ಕೆ ರೈತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಸಂಬಂಧ ಕೆ. ಆರ್.ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.