ಮೈಸೂರು: ಮುಂಜಾನೆ ಯದುವೀರ್ ಒಡೆಯರ್ ಅವರಿಂದ ಮತಭೇಟೆ ಮುಂದುವರೆದಿದ್ದು, ವಾಯು ವಿಹಾರಿಗಳ ಬಳಿ ಮತಯಾಚನೆ ಮಾಡಿದರು. ಮೈಸೂರಿನ ಕುಕ್ಕರಹಳ್ಳಿಕೆರೆಯಲ್ಲಿ ವಾಕ್ ಮಾಡುತ್ತಿದ್ದವರ ಬಳಿ ಹೋಗಿ ಮತಯಾಚನೆ ಮಾಡಿದ್ದಾರೆ. ಈ ವೇಳೆ ಯದುವೀರ್ ಜತೆ ಸೆಲ್ಫಿ ತೆಗೆಸಿಕೊಂಡು ಯುವಜನರು ಖುಷಿಪಟ್ಟರು. ಇನ್ನು ಈ ಸಂದರ್ಭ ಯದುವೀರ್ ಒಡೆಯರ್ ಗೆ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಸಾಥ್ ನೀಡಿದರು.