ಪ್ರತಿನಿಧಿ ವರದಿ ಮಾಲೂರು
ಏ.26ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರು ಮತಗಟ್ಟೆಗೆ ಆಗಮಿಸಿ ನಿರ್ಭೀತಿಯಿಂದ ಮತಚಲಾಯಿಸುವಂತೆ ಬಿಎಸ್ಎಫ್ ಪ್ಯಾರಾ ಮಿಲಿಟರಿ ಪಡೆ ಹಾಗೂ ಪೊಲೀಸರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ಅವರ ನೇತೃತ್ವದಲ್ಲಿ ಪಥಸಂಚಲನ ನಡೆಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಪಿಎಸ್ಐ ರಾಮಚಂದ್ರಯ್ಯ, ಮಂಗಳಮ್ಮ, ಎಎಸ್ಐಗಳಾದ ಆನಂದ್, ವೆಂಕಟೇಶ್, ಸಿಬ್ಬಂದಿ ಯಶವಂತ್ ರಾವ್, ಕಡತೂರು ಮಂಜುನಾಥ್, ರಮೇಶ್, ಮುನಿಯಪ್ಪ, ಚಾಲಕರಾದ ಆಂಜಿನಪ್ಪ, ಗುರು ಭಾಗವಹಿಸಿದ್ದರು.