ಹಾಸನ: ಸಾರ್ವಜನಿಕರು ಅಂಚೆ ವ್ಯವಸ್ಥೆಯ ಕುಂದು ಕೊರತೆಗಳ ಬಗ್ಗೆ ತಮ್ಮ ಅಹವಾಲುಗಳನ್ನು ನೀಡಲು ಅಂಚೆ ಅದಾಲತ್ ಕಾರ್ಯಕ್ರಮವನ್ನು ಸೆ.2ರಂದು ಸಂಜೆ 4 ಗಂಟೆಯವರೆಗೆ ಅಂಚೆ ಹಾಸನದ ಅಧೀಕ್ಷಕರ ಕಚೇರಿಯಲ್ಲಿ ಏರ್ಪಡಿಸಲಾಗಿದೆ. ಸಾರ್ವಜನಿಕರು ಅಂಚೆ ಸೇವೆಯ ಬಗ್ಗೆ ಕುಂದುಕೊರತೆಗಳು ಏನಾದರು ಇದ್ದಲ್ಲಿ ಈ ಕಚೇರಿಗೆ ಸೆ.2ರ ಬೆಳಿಗ್ಗೆ 10 ಗಂಟೆಯ ಒಳಗೆ ಸಲ್ಲಿಸಲು ಹಾಸನ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.