ಮೈಸೂರು/ಹಾಸನ: ಪ್ರಭಾವ ಇದ್ದರೂ ಪುರಪ್ರವೇಶ ಮಾಡದಂತೆ ಬಿಜೆಪಿ ವರಿಷ್ಠರು ಸಂಸದ ಪ್ರತಾಪ್ ಸಿಂಹ ಹಾಗೂ ಪ್ರೀತಂಗೌಡಗೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಕ್ಷೇತ್ರ ರಾಜ್ಯ ಪರ್ಯಟನೆ ಮಾಡುತ್ತಿರುವ ಈ ನಾಯಕರು ಅತಂತ್ರ ಸ್ಥಿತಿಯಲ್ಲಿಯಲ್ಲಿದ್ದಾರೆ. ಹಾಸನದತ್ತ ಸುಳಿಯದಂತೆ ಪ್ರೀತಂಗೌಡಗೆ ಹಾಗೂ ಮೈಸೂರಿನಿಂದ ಹೊರಗುಳಿಯಲು ಪ್ರತಾಪ್ ಸಿಂಹಗೆ ನಿರ್ದೇಶನ ನೀಡಲಾಗಿದ್ದು, ಒಳೇಟು ತಪ್ಪಿಸಲು ವರಿಷ್ಠರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲೇ ತಮ್ಮದೇ ಪ್ರಾಬಲ್ಯ ಹೊಂದಿರುವ ಪ್ರತಾಪ್ ಸಿಂಹ ಆಗೊಮ್ಮೆ ಈಗೊಮ್ಮೆ ಮೈಸೂರು- ಕೊಡಗು ಪ್ರಚಾರ ಸಭೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಹಾದಿಯಲ್ಲೇ ಪ್ರೀತಂಗೌಡ ಸಹ ಹಾಸನ ಬದಲು ಮೈಸೂರು, ಚಾಮರಾಜನಗರ ಕ್ಷೇತ್ರ ಸುತ್ತುತ್ತಿದ್ದಾರೆ. ಆದ್ರೆ ಮೈತ್ರಿ ಅಭ್ಯರ್ಥಿಗೆ ವೋಟು ಕೇಳಿದ್ರೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ನಡೆ, ನುಡಿಯ ಮೂಲಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತವಾದ್ರೆ ಮತ ವಿಭಜನೆ ಸಾಧ್ಯತೆ ಹೆಚ್ಚಾಗಿರುವುದರಿಂದ ಇಬ್ಬರೂ ನಾಯಕರನ್ನು ಕ್ಷೇತ್ರದಿಂದ ಹೊರಗಿಟ್ಟು ಚುನಾವಣೆ ನಡೆಸಲು ವರುಷ್ಠರು ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ.