- ಸಾಮಾಜಿಕ ಜಾಲತಾಣದ ಸ್ಟಾರ್ಗಳಿಬ್ಬರು ರಾಜಕೀಯ ರಂಗ ಪ್ರವೇಶ
ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಸಾಮಾಜಿಕ ಜಾಲತಾಣದ ಸ್ಟಾರ್ಗಳಾಗಿ ಮೆರೆಯುತ್ತಿರುವ ನೆರ್ಪಂಡ ಪ್ರತೀಕ್ ಪೊನ್ನಣ್ಣ ಹಾಗೂ ಅಚ್ಚಾಂಡೀರ ಪವನ್ ಪೆಮ್ಮಯ್ಯ ನೇರವಾಗಿ ರಾಜಕೀಯ ರಂಗ ಪ್ರವೇಶಿಸಿದ್ದಾರೆ.
ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಇಬ್ಬರಿಗೂ ಅಪಾರ ಪ್ರಮಾಣದ ಅಭಿಮಾನಿಗಳಿದ್ದಾರೆ. ತಮ್ಮ ವಿಚಾರಧಾರೆಗಳನ್ನು, ವಿಷಯಗಳನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ಪ್ರಸ್ತುತಿ ಪಡಿಸುವುದರ ಮೂಲಕ ಸಮಾಜದ ಗಮನ ಸೆಳೆದಿದ್ದಾರೆ.
ದಶಕಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಪ್ರತೀಕ್ ಸಾಕಷ್ಟು ಗಮನ ಸೆಳೆದಿರುವ ಯುವ ನಾಯಕ. ವಿದ್ಯಾರ್ಥಿ ನಾಯಕರಾಗಿದ್ದ ಕಾಲಘಟ್ಟದಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಜಾತ್ಯಾತೀತ ಮನೋಭಾವದ ಮೂಲಕ ಅಲ್ಪಸಂಖ್ಯಾತ ಸಮುದಾಯವನ್ನು ಸೆಳೆದಿದ್ದಾರೆ.
ಕಳೆದೊಂದು ವರ್ಷದಿಂದ ಹೊಸ ಕೊಡವ ಲಿಪಿ ಪರಿಚಯಿಸಲು ಏಕಾಂಗಿಯಾಗಿ ಶ್ರಮಿಸುತ್ತಿದ್ದ ಇವರು, ಕೊಡವ- ತುಳು ಭಾಷಿಕರ ನಡುವೆ ಬಾಂಧವ್ಯ ವೃದ್ಧಿಸಲು ಹಾಗೂ ಎರಡೂ ಭಾಷೆಗೂ ಮಾನ್ಯತೆ ಸಿಗುವಂತೆ ಮಾಡಲು ಶ್ರಮಿಸುತ್ತಾ ಬಂದಿದ್ದಾರೆ.
ಸಿಂಹಗೆ ಬೆಂಬಲ ಹೊರತು ಬಿಜೆಪಿಗೆಯಾಲ್ಲ!: ಮೈಸೂರು- ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹಗೆ ಮತ ನೀಡುವುದಾಗಿ ಸಾಮಾಜಿಕ ಜಾಲತಾಣ ಮೂಲಕ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದರು. ಬಿಜೆಪಿ ಪ್ರತಾಪ್ ಸಿಂಹ ಸ್ಪರ್ಧಿಸಲು ಟಿಕೆಟ್ ನೀಡದರಿಂದ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ನಮ್ಮೂರಿನ ಅಭಿವೃದ್ಧಿಗೆ ಸಂಸದ ಪ್ರತಾಪ್ ಸಿಂಹ ತುಂಬಾ ಶ್ರಮಿಸಿದರೆ. ಆ ಹಿನ್ನೆಲೆಯಲ್ಲಿ ಸಿಂಹಗೆ ವೈಯುಕ್ತಿಕ ನೆಲೆಗಟ್ಟಿನಲ್ಲಿ ಬೆಂಬಲ ಘೋಷಿಸಿದು ಹೊರತ್ತು ಬಿಜೆಪಿ ಪಕ್ಷಕ್ಕೆ ಬೆಂಬಲ ಘೋಷಿಸಿರಲಿಲ್ಲ ಎಂದು ಪ್ರತೀಕ್ ಸ್ಪಷ್ಟ ಪಡಿಸಿದ್ದಾರೆ.
ರಾಜಕೀಯ ಆಸಕ್ತಿ ಹೊಂದಿದ್ದ ಪ್ರತೀಕ್ ಪೊನ್ನಣ್ಣ ರಾಜಕೀಯ ಪ್ರವೇಶಿಸುವ ಇಂಗಿತವನ್ನು ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತ ಪಡಿಸಿದ್ದರು. ತಮ್ಮ ಬೆಂಬಲಿಗರ ಅಭಿಪ್ರಾಯವನ್ನು ಸಂಗ್ರಹಿಸಿದ್ದರು.
ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡರ ಕಾರ್ಯವೈಖರಿಗೆ ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸುವ ಮೇಳೆ ಕಾಂಗ್ರೆಸ್ ಸೇರ್ಪಡೆ ಆಗುವ ಸಾಧ್ಯತೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಸಿದರು.
ಮುಸ್ಲಿಂ ಸಮುದಾಯದ ವಿರೋಧ: ಒಂದು ಕಾಲಘಟ್ಟದಲ್ಲಿ ಮುಸ್ಲಿಂ ಸಮುದಾಯದವರು ಪ್ರತೀಕ್ ದೊಡ್ಡ ಅಭಿಮಾನಿಗಳಾಗಿದ್ದರು. ಸಿಂಹಗೆ ಬೆಂಬಲ ವ್ಯಕ್ತ ಪಡಿಸುತ್ತಿದ್ದಂತೆ, ಒಂದು ಕಾಲದಲ್ಲಿ ಬೆಂಬಲ ನೀಡುತ್ತಿದ್ದವರು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ವಿರೋಧಿಸಲಾರಂಭಿಸಿದರು. ತಮ್ಮ ಪರ- ವಿರುದ್ಧವಾಗಿ ವ್ಯಕ್ತವಾಗುವ ಅಭಿಪ್ರಾಯವನ್ನು ಲೆಕ್ಕಿಸದೇ ತಮ್ಮ ವಿಚಾರಗಳನ್ನು ಸದಾ ಮುಕ್ತವಾಗಿ ಹೇಳುವ ಶಕ್ತಿ ಉಳಿಸಿಕೊಂಡಿದ್ದಾರೆ.
ಕೈ ಗೆ ರಕ್ಷಣಾ ವೇದಿಕೆ ವಿಲೀನ: ಕಳೆದ ಐದು ವರ್ಷದಿಂದ ತಾವು ಮುನ್ನಡೆಸಿಕೊಂಡ ಬಂದಿರುವ ಕೊಡಗು ರಕ್ಷಣಾ ವೇದಿಕೆಯನ್ನು ಕಾಂಗ್ರೆಸ್ ಪಕ್ಷಕ್ಕೆ ವಿಲೀನ ಮಾಡಿದ್ದಾರೆ. ಇನ್ಮುಂದೆ ಕೊಡಗು ರಕ್ಷಣಾ ವೇದಿಕೆ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಪವನ್ ಘೋಷಿಸಿದರು.
ಅಚ್ಚಾಂಡೀರ ಪವನ್ ಪೆಮ್ಮಯ್ಯ ಕೂಡ ಸಾಮಾಜಿಕ ಜಾಲತಾಣದ ಸ್ಟಾರ್ ಆಗಿದ್ದಾರೆ. ಅಪಾರ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.
ಕೋವಿಡ್ ಕಾಲಘಟ್ಟದಲ್ಲಿ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ದಾನಿಗಳ ಸಹಕಾರದೊಂದಿಗೆ ವ್ಯವಸ್ಥೆ ಮಾಡಿದ್ದ ಅನ್ನದಾನಕ್ಕೆ ಮೆಚ್ಚುಗೆ ಪಡೆದ್ದಿದರು. ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದ ಮೂಲಕ ಬೆಳಕು ಚೆಲ್ಲುವ ಕೆಲಸ ಪೆಮ್ಮಯ್ಯ ಮಾಡುತ್ತಾ ಬಂದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ರಾಜಕೀಯ ಪಕ್ಷ ಸೇರುವ ಮಾತುಕತೆ ನಡೆದಿತ್ತು. ಆದರೆ ಲೋಕಸಭೆ ಚುನಾವಣಾ ಕಾಲಘಟ್ಟದಲ್ಲಿ ಕಾಂಗ್ರೆಸ್ ಸೇರುವ ಮೂಲಕ ಪವನ್ ಪೆಮ್ಮಯ್ಯ ರಾಜಕೀಯ ರಂಗ ಪ್ರವೇಶಿಸಿದ್ದಾರೆ.
ಕಾಂಗ್ರೆಸ್ಸಿಗೆ ಮರಳಿದ ಬೋಪಣ್ಣ: ಯುವ ಕಾಂಗ್ರೆಸ್ ಮುಖಂಡರಾಗಿದ್ದ ಮಾಳೇಟೀರ ಬೋಪಣ್ಣ ಕಾಂಗ್ರೆಸ್ಸಿಗೆ ಮರಳಿದ್ದಾರೆ. ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಾಲಘಟ್ಟದಲ್ಲಿ ಕೆಲವು ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿ ಕೋಂಡು ಬಿಜೆಪಿ ಸೇರ್ಪಡೆಯಾಗಿದ್ದರು.
—————————————-
ಶಾಸಕದ್ವಯರಾದ ಎ.ಎಸ್. ಪೊನ್ನಣ್ಣ, ಡಾ.ಮಂತರ್ ಗೌಡ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ಇಪ್ಪತ್ತು ವರ್ಷದ ಭವಿಷ್ಯದ ಕಾರ್ಯಯೋಜನೆ ರೂಪಿಸುತ್ತಿದ್ದಾರೆ. ಶಾಸಕದ್ವಯರ ಒಳ್ಳೆಯ ಕಾರ್ಯ ಮೆಚ್ಚಿ, ಕಾಂಗ್ರೆಸ್ ಸೇರಿದ್ದೇನೆ.
– ಪ್ರತೀಕ್ ಪೊನ್ನಣ್ಣ, ವಿರಾಜಪೇಟೆ.
ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ.ಮಂತರ್ ಗೌಡ ಅವರ ಆಹ್ವಾನದ ಮೇಲೆ ಕಾಂಗ್ರೆಸ್ ಸೇರಿದ್ದೇನೆ. ಕೊಡಗು ರಕ್ಷಣಾ ವೇದಿಕೆಯನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನ ಮಾಡಲಾಗಿದೆ. ರಕ್ಷಣಾ ವೇದಿಕೆಯ ಶೇ.90 ರಷ್ಟು ಜನ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
– ಅಚ್ಚಾಂಡೀರ ಪವನ್ ಪೆಮ್ಮಯ್ಯ, ಅಧ್ಯಕ್ಷರು, ಕೊಡಗು ರಕ್ಷಣಾ ವೇದಿಕೆ.
ಬಿಜೆಪಿಯಲ್ಲಿ ವಾತಾವರಣ ಸರಿ ಇಲ್ಲದರಿಂದ ಕಾಂಗ್ರೆಸ್ಸಿಗೆ ಮರಳಿದ್ದೇನೆ. ಕಾಂಗ್ರೆಸ್ಸಿನಲ್ಲಿ ಒಳ್ಳೆಯ ಸ್ಥಾನಮಾನ ಹೊಂದಿದ್ದ ನಾನು, ಕಾಂಗ್ರೆಸ್ ಮುಖಂಡರೊಬ್ಬರ ನಡೆಯಿಂದ ಬೇಸತ್ತು ಕಾಂಗ್ರೆಸ್ ತೊರೆದಿದ್ದೆ. ಈಗ ಮಾತೃಪಕ್ಷಕ್ಕೆ ಮರಳಿದ್ದೇನೆ.
– ಮಾಳೇಟೀರ ಬೋಪಣ್ಣ, ವಿರಾಜಪೇಟೆ.
ಫೋಟೋ 31 ಎಂಡಿಕೆ 07 ; ಪ್ರತೀಕ್ ಪೊನ್ನಣ್ಣ,
08 ; ಅಚ್ಚಾಂಡೀರ ಪವನ್ ಪೆಮ್ಮಯ್ಯ,
09 ; ಮಾಳೇಟೀರ ಬೋಪಣ್ಣ