ಪ್ರತಿನಿಧಿ ವರದಿ ತಲಕಾಡು
ತಲಕಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಲಕಾಡು. ಇಲ್ಲಿನ ಲಿಂಗ ಸಂವೇದನೆ ಸಮಿತಿ ಮತ್ತು ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಮಹಿಳಾ ಸಬಲೀಕರಣ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಮಂಗಳವಾರ ನೆರವೇರಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ದೀಪು ಭಾಗವಹಿಸಿದ್ದರು. ಅವರು ಮಹಿಳೆಯರ ರಕ್ಷಣೆಗೆ ಕಾನೂನಿನ ಅರಿವು ಮತ್ತು ಅದನ್ನು ಅನುಷ್ಠಾನಗೊಳಿಸಲು ವಿದ್ಯಾರ್ಥಿಗಳ ಭಾಗವಹಿಸುವಿಕೆ ಅತ್ಯವಶ್ಯಕ ಎಂದರು.
ಪ್ರಾಂಶುಪಾಲರಾದ ನಾಗಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕರಾದ ಡಾ.ಅಶ್ವಿನಿ ಎಸ್., ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಹರೀಶ್ ಡಿ ಮತ್ತು ಸಹಾಯಕ ಪ್ರಾಧ್ಯಾಪಕರಾದ ಸತೀಶ್ ಜಿ.ಎಂ., ಮಂಜುನಾಥ ಕೆ.ಜಿ., ಮಹಾದೇವಸ್ವಾಮಿ ಎಂ.ಎಚ್., ಡಾ.ನೀಲಯ್ಯ ಹಾಗೂ ಕಾಲೇಜಿನ ಬೋಧಕೇತರ ಸಿಬ್ಬಂದಿಗಳಾದ ಅಧೀಕ್ಷಕರಾರ ರಮೇಶ್ .ಬಿ ಮತ್ತು ಸಹಾಯಕ ತೇಜೋ ಮೂರ್ತಿ, ಮಹೇಶ್ ಹಾಜರಿದ್ದರು.