ಮೈಸೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕಾವೇರಿ ಕ್ರಿಯಾ ಸಮಿತಿಯವರು ಪುರಭವನ ಮುಂಭಾಗದ ದೊಡ್ಡ ಗಡಿಯಾರ ವೃತ್ತದಲ್ಲಿ 8ನೇ ದಿನವಾದ ಸೋಮವಾರ ಸಹ ಪ್ರತಿಭಟಿಸಿದರು.
ಈ ಹೋರಾಟಕ್ಕೆ ಬೆಂಬಲ ಸೂಚಿಸಿ 7 ರೈನ್ಬೋಸ್ ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಯ ಮಂಗಳಮುಖಿಯರು ಪಾಲ್ಗೊಂಡು, ಕನ್ನಡಿಗರ ಜೀವನದಿ ಕಾವೇರಿ ಉಳಿಸುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ಮಳೆಯಾಗದೆ ತೀವ್ರ ಬರಗಾಲ ಆವರಿಸಿದ್ದರೂ ಕಬಿನಿಯಿಂದ 3 ಸಾವಿರ, ಕೆಆರ್ ಎಸ್ ನಿಂದ 2 ಸಾವಿರ ಕ್ಯಸೆಕ್ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದು ಖಂಡನಿಯ. ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರು ಇನ್ನು ಮುಂದಾದರು ಸ್ವಾಭಿಮಾನದಿಂದ ವರ್ತಿಸಬೇಕು. ಈ ಕೂಡಲೇ ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ ರಾಜ್ಯದ ಹಿತ ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು.