ಚಾಮರಾಜನಗರ : ಸೇವೆಯಿಂದ ವಜಾಗೊಳಿಸಿರುವ ಕಾರ್ಮಿಕರನ್ನು ಮರು ನೇಮ ಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಚಾಮ ರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾರ್ಮಿಕರ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಸ್ಪತ್ರೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ಸಿಮ್ಸ್ ಆಡಳಿತ ಮಂಡಳಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿ, ಕೆಲಕಾಲ ಪ್ರತಿಭಟನೆ ನಡೆಸಿದರು.
ಸಿಮ್ಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿ ಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಶೋಷಣೆಯನ್ನು ಪ್ರಶ್ನಿಸಿದ ಕಾರಣಕ್ಕಾಗಿ ಸುಳ್ಳು ಪ್ರಕರಣವನ್ನು ದಾಖಲಿಸಿ, ಕೆಲಸದಿಂದ ವಜಾ ಮಾಡಿರುವ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಬೇಕು. ಉಪ ಕಾರ್ಮಿಕ ಆಯುಕ್ತರ ಆದೇಶದಂತೆ 5 ಜನ ಕಾರ್ಮಿಕರ 3 ತಿಂಗಳ ವೇತನವನ್ನು ಕೂಡಲೇ ಪಾವತಿ ಮಾಡಬೇಕು. ಅಲ್ಲದೇ ಶುಶ್ರೂಷಕರ ವೇತನವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.
ಕೊರೊನಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ ಶುಶ್ರೂಷಕಿಯರಾದ ಪೂರ್ಣಿಮಾ ಮತ್ತು ರಂಜಿ ತಾ ಅವರು ಹೆರಿಗೆ ರಜೆ ಹಾಕಿದ ಕಾರಣಕ್ಕೆ ಅವರ ನ್ನು ವಜಾಗೊಳಿಸಲಾಗಿದೆ. ಕೂಡಲೇ ಇವರಿಗೆ ಮೊದಲಿನಂತೆಯೇ ಕೆಲಸ ನೀಡಬೇಕು. ಹೊರಗು ತ್ತಿಗೆ ಏಜೆನ್ಸಿಯವರು 2 ವರ್ಷಗಳ ಕಾಲ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ಕಡಿತ ಮಾಡಿ ರುವುದನ್ನು ಪ್ರಶ್ನಿಸಿದ ಕಾರಣ 2022ರ ಆಗಸ್ಟ್ ತಿಂಗಳಿಂದ ಕೆಲಸದಿಂದ ಹೊರ ಹಾಕಿರುವ ಸುಮಾರು 15 ಜನ ಕೊರೋನಾ ವಾರಿಯರ್ಸ್ ಆಗಿದ್ದ ಶುಶ್ರೂಷಕರನ್ನು ಕೂಡಲೇ ಮರು ನೇಮಕ ಮಾಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.